September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎತ್ತಿನಭುಜಕ್ಕೆ ಸಿಡಿಲಿನ ಸ್ಪರ್ಶ: ಪ್ರಕೃತಿಯ ಶಕ್ತಿ ಮತ್ತು ಸೌಂದರ್ಯದ ಅಪೂರ್ವ ಸಂಗಮ

ಮೋಡಗಳ ಮಡಿಲಲ್ಲಿ ಮರೆತಿದ್ದ ಎತ್ತಿನಭುಜ, ಒಂದು ಕ್ಷಣ ಸಿಡಿಲಿನ ಹೊಳಪಿಗೆ ತೇಲಿತು. ಪ್ರಕೃತಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ ಆ ಕ್ಷಣ, ಕಣ್ಣು ಕಂಡ ಸೌಂದರ್ಯ ಕ್ಯಾಮೆರಾದಲ್ಲಿ ಶಾಶ್ವತವಾಯಿತು.”

ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ನಡುವೆ ಗಗನಚುಂಬಿ ಮೋಡಗಳು ಆವರಿಸಿಕೊಂಡಿದ್ದ ಸಮಯದಲ್ಲಿ ಎತ್ತಿನಭುಜ ಪರ್ವತದ ಸಮೀಪ ಸಿಡಿಲೊಂದು ಭೂಮಿಗೆ ಅಪ್ಪಳಿಸಿದ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲವೇ ಕ್ಷಣಗಳ ಈ ನೋಟ ಪ್ರಕೃತಿಯ ಸೌಂದರ್ಯ ಮತ್ತು ಅದರ ಅಗಾಧ ಶಕ್ತಿಯನ್ನು ಒಂದೇ ಚಿತ್ರದಲ್ಲಿ ಅನಾವರಣಗೊಳಿಸಿದೆ.

ಮಳೆಗಾಲದ ಆರಂಭದೊಂದಿಗೆ ಮಲೆನಾಡಿನ ಪ್ರದೇಶಗಳು ದಟ್ಟ ಮೋಡಗಳಿಂದ ಆವರಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ ಕಪ್ಪು ಮೋಡಗಳ ಮಧ್ಯೆ ಆಕಾಶವನ್ನು ಚೀರಿ ಭೂಮಿಯತ್ತ ಚಿಮ್ಮಿದ ಸಿಡಿಲಿನ ರೇಖೆ ಎತ್ತಿನಭುಜದ ಹಿನ್ನೆಲೆಯೊಂದಿಗೆ ಬೆರೆತು ಮನಮೋಹಕ ದೃಶ್ಯವೊಂದನ್ನು ಸೃಷ್ಟಿಸಿದೆ. ಚಿತ್ರದಲ್ಲಿ ಕಾಣುವ ಹಸಿರು ಕಾಡು, ಬೆಟ್ಟಗಳ ಸರಣಿ, ಸುರಿಯುತ್ತಿರುವ ಮಳೆ ಹಾಗೂ ಸಿಡಿಲಿನ ಹೊಳಪು ಪ್ರಕೃತಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ.
ಎತ್ತಿನಭುಜ ಪರ್ವತವು ತನ್ನ ವಿಶಿಷ್ಟ ಆಕಾರದಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಮಳೆಗಾಲದಲ್ಲಿ ಮೋಡಗಳ ನಡುವೆ ಮರೆತು ಕಾಣಿಸಿಕೊಳ್ಳುವ ಈ ಪರ್ವತಶ್ರೇಣಿ ಛಾಯಾಗ್ರಾಹಕರಿಗೂ ಪ್ರಕೃತಿ ಪ್ರಿಯರಿಗೂ ನೆಚ್ಚಿನ ತಾಣವಾಗಿದೆ. ಇದೀಗ ಸಿಡಿಲಿನ ಈ ಅಪರೂಪದ ಕ್ಷಣ ಸೇರ್ಪಡೆಯಾಗಿರುವುದು ಈ ಪ್ರದೇಶದ ಸೌಂದರ್ಯಕ್ಕೆ ಮತ್ತೊಂದು ವಿಶೇಷತೆಯನ್ನು ನೀಡಿದೆ.

ತಜ್ಞರ ಪ್ರಕಾರ ಮಳೆಗಾಲದಲ್ಲಿ ಉಷ್ಣತೆ ಮತ್ತು ತೇವಾಂಶದ ಪ್ರಮಾಣ ಹೆಚ್ಚಾದಾಗ ಮೋಡಗಳ ನಡುವೆ ವಿದ್ಯುತ್‌ ಚಾರ್ಜ್‌ ಸಂಗ್ರಹವಾಗಿ ಗುಡುಗು-ಮಿಂಚು ಉಂಟಾಗುತ್ತದೆ. ಆ ವಿದ್ಯುತ್‌ ಭೂಮಿಯೊಂದಿಗೆ ಸಂಪರ್ಕ ಸಾಧಿಸುವ ಕ್ಷಣವೇ ಸಿಡಿಲಾಗಿ ಗೋಚರಿಸುತ್ತದೆ. ಇದರ ಬೆಳಕು ಮತ್ತು ಶಕ್ತಿ ಅಪಾರವಾಗಿದ್ದು ಕೆಲವೇ ಕ್ಷಣಗಳಲ್ಲಿ ಸಾವಿರಾರು ವೋಲ್ಟ್‌ಗಳ ವಿದ್ಯುತ್‌ ಹೊರಸೂಸುತ್ತದೆ.

ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಪ್ರಕೃತಿಯ ಅದ್ಭುತ ವೈಭವದ ಜೊತೆಗೆ ಅದರ ಎದುರು ಮಾನವನ ಅಲ್ಪತೆಯನ್ನು ನೆನಪಿಸುವ ದೃಶ್ಯವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ರಾಜೇಶ್ ಎಂ ಕಾನರ್ಪ
ಚಿತ್ರ: ಸುಕೇಶ್ ಜೈನ್ ಧರ್ಮಸ್ಥಳ

Related posts

ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ: ಎಸ್ ಕೆ ಎ ಬೆಳ್ತಂಗಡಿ ವಿದ್ಯಾರ್ಥಿ ಯಶಸ್ವಿ ಉತ್ತೀರ್ಣ

Suddi Udaya

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಕ್ಲಾರಿಯನ್ ಕಂಪೆನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಮಹೇಶ್ ಭೇಟಿ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ “ವನ್ ಮಿನಿಟ್ ಉಮಾ”ರಿಂದ ವಿಶೇಷ ಬ್ಯೂಟೀಶಿಯನ್ ಕಾರ್ಯಾಗಾರ

Suddi Udaya

ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕವ್ವಾಲಿಯಲ್ಲಿ ತೃತೀಯ ಸ್ಥಾನವನ್ನು ಮುಡಿಗೇರಿಸಿಕೊಂಡ ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ

Suddi Udaya

ತೆಕ್ಕಾರು ಗ್ರಾಮದಲ್ಲಿ ರಾತ್ರಿ ವೇಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್

Suddi Udaya

ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ

Suddi Udaya
error: Content is protected !!