July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮದ್ದಡ್ಕ: 15 ನೇ ವರ್ಷದ ಗಣೇಶೋತ್ಸವದ ಪೂರ್ವ ತಯಾರಿ ಸಭೆ

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ 15 ನೇ ವರ್ಷದ ಗಣೇಶೋತ್ಸವದ ಪೂರ್ವ ತಯಾರಿ ಸಭೆ ಸಮಿತಿಯ ಅಧ್ಯಕ್ಷ ತರುಷ್ ಜೆ ಹೇರಾಜೆ ಇವರ ಅಧ್ಯಕ್ಷತೆಯಲ್ಲಿ ಮದ್ದಡ್ಕ ಬಂಡಿಮಠ ಮೈದಾನದ ವೆಲ್ಕ ಯೂತ್ ಕ್ಲಬ್ ರಂಗ ಮಂದಿರದಲ್ಲಿ ಮೇ 31ರಂದು ಜರಗಿತು.

ಸಭೆಯಲ್ಲಿ 15 ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ನಡೆಯುವ ವೈದಿಕ ವಿಧಿ ವಿಧಾನಗಳ ಬಗ್ಗೆ ತಾಲೂಕಿನ ಪ್ರೌಡ ಶಾಲೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟ, ಸಾರ್ವಜನಿಕ ಆಟೋಟ ಸ್ಪರ್ಧೆಗಳ ಸಾoಸ್ಕ್ರತಿಕ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನೂಪ್ ಬoಗೇರ, ನಿಕಟ ಪೂರ್ವ ಅಧ್ಯಕ್ಷರಾದ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಕಾರ್ಯಧ್ಯಕ್ಷರಾದ ದಾಮೋದರ್ ಕುಂದರ್ ಸಬರಬೈಲು, ಧನ‌ಲಕ್ಷಿ ಚoದ್ರಶೇಖರ್ ಕರಿಯಬೆ ಸೊಣoದೂರು, ಪ್ರಧಾನ ಸoಚಾಲಕ ಚoದ್ರಶೇಖರ್ ಕೋಟ್ಯಾನ್ ಕರಿಯಬೆ ಸೊಣoದೂರು, ದಿನೇಶ್ ಮೂಲ್ಯ ಕೊಂಡೆಮಾರು, ಉಪಾಧ್ಯಕ್ಷರಾದ ಗಾಯತ್ರಿ ಜೆ ಬಂಗೇರ ಪ್ರಣಮ್ಯ ಕುವೆಟ್ಟು, ಸoಘಟನಾ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಮಾಲಾಡಿ, ಸಾoಸ್ಕ್ರತಿಕ ಕಾರ್ಯದರ್ಶಿ ಪ್ರೇಮ ಎಂ ಬಂಗೇರ, ಸುಜಾತ ಚoದ್ರಹಾಸ್ ಕೇದೆ, ವೈದಿಕ ಸಮಿತಿ ಸoಚಾಲಕ ಅನoತ ಎಸ್ ಇರ್ವತ್ರಾಯ ತಂಗೋಯಿ, ರಾಜು ಕುಮಾರ್ ಭಟ್ ಬರಮೇಲು, ಗಣೇಶೋತ್ಸವ ಕಾರ್ಯಕ್ರಮದ ಸoಘಟಕರಾದ ಚoದ್ರಹಾಸ್ ಕೇದೆ, ಹಿರಿಯರಾದ ವ್ರಷಭ ಆರಿಗ ಪರಾರಿ ಗುತ್ತು, ಜಗದೀಶ್ ಬoಗೇರ ಕುವೆಟ್ಟು, ರಾಮಚoದ್ರ ಪೂಜಾರಿ ನ್ಯಾಯದಕಲ, ಕೃಷ್ಣಪ್ಪ ಪೂಜಾರಿ ಕಿನ್ನಿಗೋಳಿ ಹಾಗೂ ಸಮಿತಿಯ ಸದಸ್ಯರಾದ ಉಮೇಶ್ ಮದ್ದಡ್ಕ, ಯೋಗಿಶ್ ನಾಯ್ಕ್ ಭದ್ರಕಜೆ, ದಿಶಾನ್ ಕರಿಯಬೆ, ದಿಶಾಲಿ ಕರಿಯಬೆ ಉಪಸ್ಥಿತರಿದ್ದರು.
(✍️ ಮನು ಮದ್ದಡ್ಕ )

Related posts

ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ : ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Suddi Udaya

ಬೆಳಾಲು: ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಮ್ಯಾರಥಾನ್ ಯೋಗ ಬೋಧನೆಯಿಂದ ರೂ.2,52,525 ದೇಣಿಗೆ ಸರಕಾರಿ ಶಾಲಾಭಿವೃದ್ಧಿಗೆ ಹಸ್ತಾಂತರ

Suddi Udaya

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ: ಶಾಸಕ ಹರೀಶ್ ಪೂಂಜ ಸೇರಿ 65 ಮಂದಿಗೆ ಸಮನ್ಸ್ ಜಾರಿ

Suddi Udaya

ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಗೆಲುವು ನಿಶ್ಚಿತ- ಮಾಜಿ ಶಾಸಕ ವಸಂತ್ ಬಂಗೇರ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya
error: Content is protected !!