September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಟೀಮ್ ದೇವರಗುಡ್ಡೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿಗೆ ಚೇರ್ ವಿತರಣೆ

ಕಲ್ಮಂಜ: ಕಲ್ಮಂಜ ಗ್ರಾಮದ ಪಜಿರಡ್ಕ- ಮದ್ಮಲ್ ಕಟ್ಟೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ದಿನಾಚರಣೆ ಪ್ರಯುಕ್ತ ಟೀಮ್ ದೇವರಗುಡ್ಡೆ ವತಿಯಿಂದ ನ.25 ರಂದು ಕುರ್ಚಿ ವಿತರಣೆ ಮಾಡಿದರು.
15-20 ಮಕ್ಕಳು ಇರುವ ಅಂಗನವಾಡಿ ಕೇಂದ್ರ ಇದಾಗಿದ್ದು,ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಮತ್ತು ಮಳೆಗಾಲದಲ್ಲಿ ನೀರು ಸೋರುವ ಸ್ಥಿತಿ ಈ ಅಂಗನವಾಡಿ ಕೇಂದ್ರದ್ದಾಗಿದೆ.ಹಾಗೆಯೇ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡದ ಬೇಡಿಕೆ ಅನೇಕ ವರ್ಷಗಳಿಂದ ಕೇಳಿಬರುತ್ತಿದ್ದರು ಯಾವುದೇ ಸರಕಾರ ಈ ಕಡೆ ಗಮನ ಹರಿಸದಿರುವುದು ಬೇಸರದ ಸಂಗತಿ ಎಂಬುದು ಊರವರ ಅಭಿಪ್ರಾಯವಾಗಿದೆ.


ಹೆಚ್ಚಾಗಿ ಇಂಗ್ಲಿಷ್ ಶಿಕ್ಷಣಕ್ಕಾಗಿ ಮರುಹೋಗುತ್ತಿರುವ ಈ ಕಾಲಘಟ್ಟದಲ್ಲಿ ಅಂಗನವಾಡಿ ಕೇಂದ್ರಗಳನ್ನು ಉಳಿಸಿ ಬೆಳೆಸುವುದು ಸರಕಾರದ ಮತ್ತು ಊರವರ ಕರ್ತವ್ಯವಾಗಿದೆ.


ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ರೇಖಾ, ಆಶಾ ಕಾರ್ಯಕರ್ತೆ ವಿಜಯಾ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಸಹಾಯಕಿ ಶ್ರೀದೇವಿ, ಟೀಮ್ ದೇವರಗುಡ್ಡೆಯ ಹರೀಶ್ ಗೌಡ,ಸಚಿನ್ ಗೌಡ ಕಲ್ಮಂಜ, ಶಿವಪ್ರಸಾದ್, ಸಂಧ್ಯಾ, ಪುಷ್ಪವತಿ ಹಾಗೂ ಮಕ್ಕಳ ಪೋಷಕರು ಹಾಗೂ ಊರವರು ಪಾಲ್ಗೊಂಡಿದ್ದರು.

Related posts

ನಡ ಸ.ಹಿ.ಪ್ರಾ. ಶಾಲಾ ಶತಮಾನೋತ್ಸವ ಸಮಿತಿಯಿಂದ ಡಾ|| ಹೆಗ್ಗಡೆಯವರ ಭೇಟಿ

Suddi Udaya

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆಡಳಿತ ಮಂಡಳಿಯ ಚುನಾವಣೆ: ಅಂಡಿಂಜೆಯಲ್ಲಿ ಸಹಕಾರ ಭಾರತಿ ಸಭೆ

Suddi Udaya

ತುಂಬೆತ್ತಡ್ಕ ರಾಣೆಯಾರ್ ಸಮಾಜ ಸೇವಾ ಸಂಘದ ವತಿಯಿಂದ ಶ್ರಮದಾನ

Suddi Udaya

ನೆರಿಯ: ಕುಡುಮಡ್ಕನಿವಾಸಿ ಶ್ರೀಮತಿ ಜಯಲಕ್ಷ್ಮಿ ನಿಧನ

Suddi Udaya

ಬಜಿರೆ ಮುದ್ದಾಡಿಯ ಮಂಗಿನಿಬೆಟ್ಟು ಗದ್ದೆಯಲ್ಲಿ ಆಟಿಡೊಂಜಿ ಕೆಸರ್‌ದ ಗೊಬ್ಬು

Suddi Udaya

ಫೆ.5-6: ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ

Suddi Udaya
error: Content is protected !!