ಶಿಶಿಲ ಗ್ರಾಮ ಪಂಚಾಯತ್ನ 2025-26ನೇ ಸಾಲಿನ ದ್ವಿತಿಯ ಸುತ್ತಿನ ಗ್ರಾಮ ಸಭೆಯು ಆಡಳಿತಾಧಿಕಾರಿ ಭರತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜೂ.04 ರಂದು ಶಿಶಿಲ ಗ್ರಾಮ ಪಂಚಾಯತ್ ಕಚೇರಿ ಸಭಾಭವನದಲ್ಲಿ ನಡೆಯಿತು.

ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಭಾಗವಹಿಸಿದರು.

ಈ ವೇಳೆ ಶಿಶಿಲದಲ್ಲಿ ಅಕ್ರಮ -ಸಕ್ರಮ ಅರ್ಜಿ ಇದುವರೆಗೆ ಒಂದೂ ವಿಲೇವಾರಿ ಆಗದಿರುವ ಬಗ್ಗೆ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕರುಣಾಕರ ಅಡ್ಡಹಳ್ಳ, ಸಂದೀಪ್ ಅಮ್ಮುಡಂಗೆ ಹಾಗೂ ಇತರ ಅಕ್ರಮ -ಸಕ್ರಮ ಅರ್ಜಿದಾರರು ಕಂದಾಯ ಅಧಿಕಾರಿಯವರಿಗೆ ಮನವಿ ನೀಡಿ 3 ತಿಂಗಳೊಳಗೆ ಅಕ್ರಮ -ಸಕ್ರಮ ಅರ್ಜಿ ಸಿಟ್ಟಿಂಗ್ ಗೆ ಬರಬೇಕು, ಇಲ್ಲವಾದಲ್ಲಿ ತಹಶೀಲ್ದಾರ್ ಕಚೇರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದರು.
ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶಿಶಿಲ ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಿಬ್ಬಂದಿ ಸುಂದರ ವರದಿ ವಾಚಿಸಿ, ಜಮಾ -ಖರ್ಚು ಬಗ್ಗೆ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ, ಧನ್ಯವಾದವಿತ್ತರು.












