ಬೆಳ್ತಂಗಡಿ: ತೆಕ್ಕಾರಿನ ಯುವಕ ಗುರುಕಿರಣ್ ಅವರು ಭಾರತೀಯ ಸಶಸ್ತ್ರ ಪಡೆಗಳ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇವರು ತೆಕ್ಕಾರು ಗ್ರಾಮದ ಮರಮ ಗುತ್ತು ಹೊಸಮನೆ ನಿವಾಸಿ ಉಮೇಶ್ ಪೂಜಾರಿ ಮತ್ತು ಶ್ರೀಮತಿ ರವರ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಪೆರಿಯೊಟ್ಟುನಲ್ಲಿ ಪೂರ್ಣಗೊಳಿಸಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಉಪ್ಪಿನಂಗಡಿಯಲ್ಲಿ ಪೂರ್ಣಗೊಳಿಸಿದರು.
ಚಿಕ್ಕ ವಯಸ್ಸಿನಿಂದಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯನ್ನು ಪೂರೈಸಲು ತರಬೇತಿಗಾಗಿ ಮಂಗಳೂರಿನ “ವೀರ ರಾಣಿ ಅಬ್ಬಕ್ಕ ಸೇನಾ ” ತರಬೇತಿ ಶಾಲೆಯಲ್ಲಿ 4 ತಿಂಗಳ ತರಬೇತಿಯಿಂದ ಪ್ರಾರಂಭಿಸಿದರು. ಇವರ ಸತತವಾಗಿ 3 ವರ್ಷದ ಕಠಿಣ ಪರಿಶ್ರಮ. ಶಿಸ್ತು ಹಾಗೂ ದೃಢ ಸಂಕಲ್ಪದ ಮೂಲಕ ಈ ಮಹತ್ತರ ಸಾಧನೆಯನ್ನು ಗಳಿಸಿದ್ದಾರೆ.












