ಪುತ್ತಿಲ: ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಉಪ್ಪಿನಂಗಡಿಯ ಮದರ್ ಗೋಲ್ಡ್ ಮಾಲಕ ಮಹಮ್ಮದ್ ಸಿರಾಜುದ್ದೀನ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರ ಸಂರಕ್ಷಣೆ ಒಬ್ಬರ ಕೆಲಸವಲ್ಲ ಅದು ಎಲ್ಲರ ಕೆಲಸ ಮತ್ತು ನಿತ್ಯವೂ ಮಾಡುವ ಕರ್ತ್ಯವಾಗಬೇಕು. ಆಗ ಪರಿಸರ ಸಂರಕ್ಷಣೆ ಖಂಡಿತಾ ಆಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ ವಹಿಸಿ ಮಾತನಾಡಿ ಭೂಮಿ ನಮ್ಮನ್ನು ಸಲವುಹ ತಾಯಿ ಅದು ನಿತ್ಯ ಸೌಂದರ್ಯದಿAದ ಕೂಡಿರಬೇಕು. ಭೂಮಿಯ ಸೌಂದರ್ಯವೆAದರೆ ಹಸಿರು ಮತ್ತು ಜೀವವೈವಿದ್ಯತೆ. ಅದಕ್ಕಾಗಿ ನಾವು ವಿವಿಧ ಜಾತಿಯ ಗಿಡಮರಗಳನ್ನು ಬೆಳೆಸಿ ಭೂಮಿಯನ್ನು ರಕ್ಷಿಸುವ ಕೆಲಸಮಾಡಬೇಕೆಂದರು.
ಶಿಕ್ಷಕರಾದ ಸೆವ್ರಿನ್ ಮಾರ್ಟಿಸ್ ಸ್ವಾಗತಿಸಿದರು. ಇಕೋ ಕ್ಲಬ್ ನೋಡಲ್ ಶಿಕ್ಷಕ ಮಹೇಂದ್ರ ಪೂಜಾರಿ ಇಕೋ ಕ್ಲಬ್ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಗೀತಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥರವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ವಿವಿಧ ಗಿಡಗಳನ್ನು ನೆಟ್ಟರು. ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ತುಳಸಿ, ಹರ್ಷಿತ ಸಹಕರಿಸಿದರು.












