July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿರ್ಲಾಲು ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ರಜತ ಮಹೋತ್ಸವ

ಅಳದಂಗಡಿ ವಲಯದ ಶಿರ್ಲಾಲು ಎ ಕಾರ್ಯಕ್ಷೇತ್ರದ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಅಧ್ಯಕ್ಷೆ ಪ್ರೇಮ ಕೋರ್ದೊಟ್ಟು ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮುಖಾಂತರ ವಾರ್ಷಿಕೋತ್ಸವವನ್ನು ಉದ್ಘಾಟಿಸಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಮಾತೃಶ್ರೀ ಅಮ್ಮನವರ ಕನಸನ್ನು ನನಸು ಮಾಡಿದ ಹೆಗ್ಗಳಿಕೆ ಈ ಅನ್ನಪೂರ್ಣೇಶ್ವರಿ ಸಂಘದ್ದು ಹಾಗೂ ಸಂಘ ಎಳೆಯ ಪ್ರಾಯದಲ್ಲಿ ನಮ್ಮ ಸಂಘ ಹೇಗೆ ಇತ್ತು ಎಂಬುದರ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ಗೋಡೆಯ ಮದ್ಯ ಇದ್ದ ಮಹಿಳೆಯರು ಹೊರಗಿನ ಪ್ರಪಂಚ ನೋಡಿದ್ದೇ ಗ್ರಾಮಾಭಿವೃದ್ಧಿ ಯೋಜನೆಯ ಈ ಅನ್ನಪೂರ್ಣನೇಶ್ವರಿ ಸಂಘದಿಂದ ಎಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ವಲಯ ಮೇಲ್ವಿಚಾರಕರಾದ ಯಶೋಧ ರವರು ಮತ್ತು ತರಬೇತಿಯನ್ನು ಪಡೆಯಲು ಬಂದ ಮೇಲ್ವಿಚಾರಕ ವಸಂತ ರವರು ಸಂಘಕ್ಕೆ ಶುಭ ಹಾರೈಸಿದರು. 25 ವರ್ಷದಿಂದ ಸಂಘ ನಡೆದು ಬಂದ ದಾರಿ ಮತ್ತು ಅದರ ಸದ್ವಿನಿಯೋಗ ಪಡೆದ ಬಗ್ಗೆ ಅನಿಸಿಕೆಯನ್ನು ಡೀಕಮ್ಮ ಕರ್ದೋಟ್ಟು ಮತ್ತು ಹರಿಣಾಕ್ಷಿಯವರು ವ್ಯಕ್ತಪಡಿಸಿದರು. ವಾರದ ಸಭೆ ನಡೆಯುವ ಮನೆಯವರಾದ ಶ್ರೀಮತಿ ಮನೀಷ ಲಕ್ಷ್ಮಣ ಪೂಜಾರಿಯವರು ಮಹಿಳೆಯರ ತಾಳ್ಮೆ ಮತ್ತು ಸಹನೆಯ ಬಗ್ಗೆ ಮಾತನಾಡಿದರು. ಸೇವಾ ಪ್ರತಿನಿಧಿಯವರಾದ ಚಂದ್ರವತಿಯವರು ತಮ್ಮ ಸಂಘದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿ ಸಂಘಕ್ಕೆ ಶುಭ ಹಾರೈಸಿದರು.

ಹರಿಣಾಕ್ಷಿ ನಿರೂಪಿಸಿ, ಶೋಭಾ ಕರ್ದೋಟ್ಟು ಸ್ವಾಗತಿಸಿದರು . ಶಿಲ್ಪ ಬಾರ್ಲೊಡಿ ಬೈಲ್ ಧನ್ಯವಾದವಿತ್ತರು.

Related posts

ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

Suddi Udaya

ಬೆಳ್ತಂಗಡಿಯಲ್ಲಿ “ಧರ್ಮ ವಿಜಯ ಸಮಾವೇಶ”ದ ಸಿದ್ಧತೆ ಬಗ್ಗೆ ಗಣ್ಯರ ಸಮಾಲೋಚನಾ ಸಭೆ: ಸೆ.5 ಕ್ಕೆ ಧರ್ಮಸ್ಥಳದಲ್ಲಿ ಉಭಯ ಜಿಲ್ಲಾ ಧರ್ಮಕ್ಷೇತ್ರಗಳ ಮುಖ್ಯಸ್ಥರ ಸಮಾವೇಶ

Suddi Udaya

ಬೆಳ್ತಂಗಡಿ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ರೂ.4.75 ಲಕ್ಷ ಸಾಲ ಪಡೆದು ವಂಚನೆ

Suddi Udaya

ಅನಾರೋಗ್ಯದಿಂದ ಬಳಲುತ್ತಿರುವ ಚೈತ್ರೇಶ್ ಮೊಗ್ರು ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಓಡಿಲ್ನಾಳ: ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ; ಕಳಿಯ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ವಸಂತ ಮಜಲು ಭೇಟಿ ನೀಡಿ ತುರ್ತು ಪರಿಹಾರ

Suddi Udaya

ಕಡಿರುದ್ಯಾವರದಲ್ಲಿ ಒಂಟಿ ಸಲಗದ ಹಾವಳಿ: ಅಪಾರ ಅಡಿಕೆ ಗಿಡ, ಬಾಳೆ ಗಿಡಗಳಿಗೆ ಹಾನಿ

Suddi Udaya
error: Content is protected !!