ಕಲ್ಮಂಜ : ಬಿಜೆಪಿ 87ನೇ ಬೂತಿನ ವತಿಯಿಂದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಇಂದು (ಜೂನ್ 10) ವಿಶೇಷ ಪೂಜೆ ಸಲ್ಲಿಸಲಾಯಿತು.


ಮುಂದಿನ ದಿನಗಳಲ್ಲೂ ಪ್ರದಾನಿ ನರೇಂದ್ರ ಮೋದಿಯವರು ಇನ್ನು ಹೆಚ್ಚು ವರ್ಷಗಳ ಕಾಲ ದೇಶದ ಸೇವೆ ಮಾಡಲು ಹಾಗೂ ಅವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ದೊರೆಯಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಗೌಡ ಊಂಕ್ರೊಟ್ಟು, ಸತ್ಯ, ಚೇತನ್ ಅಲೆಕ್ಕಿ, ರಾಧಾಕೃಷ್ಣ ಗೌಡ, ಉಪಸ್ಥಿತರಿದ್ದರು.













