ಬೆಳ್ತಂಗಡಿ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಧರ್ಮಸ್ಥಳದ ಸುಬ್ರಮಣ್ಯ ಪ್ರಸಾದ್ ಮಧುರಾ ದಂಪತಿಯ ಪುತ್ರಿ ಮಾಧುರ್ಯ ಇವರನ್ನು ಉಪ್ಪಿನಂಗಡಿ ಹವ್ಯಕ ಮಂಡಲ ಮತ್ತು ಉಜಿರೆ ಹವ್ಯಕ ವಲಯದಿಂದ ಉಜಿರೆಯ ಅತ್ತಾಜೆ ರಮೇಶ್ ಭಟ್ ಇವರ ಮನೆಯಲ್ಲಿ ಗೌರವಿಸಲಾಯಿತು .







