ಬೆಳ್ತಂಗಡಿ: ಕ್ರಾಂತಿವೀರ ಉಪ್ಪಿನಂಗಡಿ ಮಂಜ ಬೈದ್ಯರ ಸಮಗ್ರ ಹೋರಾಟ, ಬಲಿದಾನದ ವಿವರವನ್ನು ಒಳಗೊಂಡ ‘ಕ್ರಾಂತಿ ವೀರ ಮಂಜ ಬೈದ್ಯ’ ಪುಸ್ತಕವನ್ನು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಬಿಡುಗಡೆ ಗೊಳಿಸಿದರು.
ಕ್ರಾಂತಿವೀರ ಮಂಜ ಬೈದ್ಯರ ಕಥೆ ಬರಿಯ ಇತಿಹಾಸ ಮಾತ್ರವಲ್ಲ, ಅದು ಯುವ ಸಮುದಾಯದ ಭವಿಷ್ಯದ ದೃಷ್ಟಿಯಿಂದ ರಾಷ್ಟ್ರೀಯ ಪ್ರಜ್ಞೆಯೂ ಹೌದು. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ವೀರ ಯೋಧರ ಪುತ್ಥಳಿ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ, ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ಸಂಚಾಲಕರಾದ ಬಾಲಕೃಷ್ಣ ಶೆಟ್ಟಿ, ಶಶಿಧರ ಕಲ್ಮoಜ, ಎಂ.ಕೆ. ಸಮಿತಿ ಸದಸ್ಯರುಗಳಾದ ಪ್ರಸಾದ್, ಗುರುರಾಜ ಗುರಿಪಲ್ಲ , ರಮೇಶ್ ಧರ್ಮಸ್ಥಳ, ಪುರುಷೋತ್ತಮ ಧರ್ಮಸ್ಥಳ, ಸುನಿಲ್ ಕನ್ಯಾಡಿ ,ರಾಘವೇಂದ್ರ ಗೌಡ, ರವೀಂದ್ರ ಅರಳಪದವು ,ಗುರು ಪ್ರಸಾದ್ ಉಜಿರೆ,ರೂಪೇಶ ಧರ್ಮಸ್ಥಳ, ಉಪಸ್ಥಿತರಿದ್ದರು.













