23.8 C
ಪುತ್ತೂರು, ಬೆಳ್ತಂಗಡಿ
July 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

12 ವರ್ಷಗಳ ಮೋದಿ ನೇತೃತ್ವ – ಹೊಸ ಭಾರತದ ಆತ್ಮವಿಶ್ವಾಸದ ಪಯಣ: ಅನಿಲ್ ಕುಮಾರ್ ಯು

ಬೆಳ್ತಂಗಡಿ: ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು 12 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಸಂದರ್ಭದಲ್ಲಿ, ಭಾರತವು ರಾಷ್ಟ್ರೀಯ ಚಿಂತನೆ, ಅಭಿವೃದ್ಧಿಯ ವೇಗ ಮತ್ತು ಜಾಗತಿಕ ಗೌರವದ ಹೊಸ ಎತ್ತರವನ್ನು ತಲುಪಿದೆ.

ಒಬ್ಬ ವಕೀಲನಾಗಿ ಸುಶಾಸನ ಮತ್ತು ಪಾರದರ್ಶಕ ಆಡಳಿತವನ್ನು, ಒಬ್ಬ ಕಾರ್ಮಿಕ ನಾಯಕನಾಗಿ ಶ್ರಮಜೀವಿಗಳ ಗೌರವ ಮತ್ತು ಅಭಿವೃದ್ಧಿಯನ್ನು, ಒಬ್ಬ ರಾಷ್ಟ್ರೀಯವಾದಿಯಾಗಿ ಭಾರತದ ಆತ್ಮನಿರ್ಭರತೆ, ಭದ್ರತೆ ಮತ್ತು ವಿಶ್ವಮಟ್ಟದ ಪ್ರಭಾವವನ್ನು ನಾನು ಮಹತ್ವದ ಸಾಧನೆಗಳಾಗಿ ಕಾಣುತ್ತೇನೆ.

ಇಂದು ದೇಶಕ್ಕೆ ಅಗತ್ಯವಿರುವುದು ವ್ಯಕ್ತಿಪೂಜೆ ಅಲ್ಲ, ರಾಷ್ಟ್ರಪೂಜೆ; ಪಕ್ಷನಿಷ್ಠೆ ಅಲ್ಲ, ರಾಷ್ಟ್ರನಿಷ್ಠೆ. ಬಲಿಷ್ಠ, ಸ್ವಾವಲಂಬಿ ಮತ್ತು ಸಮೃದ್ಧ ಭಾರತ ನಿರ್ಮಾಣವು ಸರ್ಕಾರದಷ್ಟೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.

ಕಳೆದ 12 ವರ್ಷಗಳು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ್ದರೆ, ಮುಂದಿನ 25 ವರ್ಷಗಳು ಭಾರತದ ಶತಮಾನವನ್ನು ನಿರ್ಮಿಸಲಿವೆ. ಅಭಿವೃದ್ಧಿ, ಆತ್ಮವಿಶ್ವಾಸ ಮತ್ತು ರಾಷ್ಟ್ರಹಿತದ ಈ ಪಯಣ ಇನ್ನಷ್ಟು ವೇಗ ಪಡೆಯಲಿ ಎಂಬುದು ನನ್ನ ಆಶಯ ಎಂದು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ, ವಕೀಲರು ಅನಿಲ್ ಕುಮಾರ್ ಯು ತಿಳಿಸಿದರು.

Related posts

ಮಚ್ಚಿನ: ಮಾಣೂರು ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಬಾಲಾಲಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಕಲಶಾಭಿಷೇಕ

Suddi Udaya

ಚಾರ್ಮಾಡಿ ಘಾಟಿ: ಮರ ಧಾರಾಶಾಹಿ-ಸಂಚಾರ ಸ್ಥಗಿತ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಪ್ರತಿಭಾ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಹಾಗೂ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

Suddi Udaya

ರಾಷ್ಟ್ರಮಟ್ಟದ ಪುರುಷರ ಯೋಗಾಸನ ಸ್ಪರ್ಧೆಗೆ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿಗಳ ಆಯ್ಕೆ

Suddi Udaya
error: Content is protected !!