ಗೇರುಕಟ್ಟೆ: ಜೆ. ಕೆ. ನಿವಾಸಿ, ಕರಾಯ ಮೂರ್ತೆದಾರರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ, ತಣ್ಣೀರುಪಂತ ಮತ್ತು ಕಳಿಯ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ಬೆಳ್ತಂಗಡಿ ಬಿಲ್ಲವ ಸಂಘದ ಮಾಜಿ ನಿರ್ದೇಶಕ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಗೈಯ್ಯುತ್ತಿರುವ ಎಂ. ಜನಾರ್ದನ ಪೂಜಾರಿ ಮತ್ತು ಕೆ. ಕಮಲಾವತಿ ದಂಪತಿಯ ವೈವಾಹಿಕ 70ನೇ ವರ್ಷದ ಸಂಭ್ರಮ ಜೂ. 14ರಂದು ಗೇರುಕಟ್ಟೆ ಸಹಕಾರಿ ಸೌಧದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30ರಿಂದ ಪಣಕಜೆ ನಾದ ಪ್ರಿಯ ಸಂಕೀರ್ತನ ತಂಡದಿಂದ ಭಜನಾ ಸಂಕೀರ್ತನೆ ನಡೆಯಲಿದೆ.













