ಬೆಳ್ತಂಗಡಿ: ಬೆಂಗಳೂರು ಬ್ಯಾರಿ ಜಮಾಅತ್ ಇದರ 6ನೇ ತ್ರೈವಾರ್ಷಿಕ, ಮಹಾಸಭೆಯು ಇತ್ತೀಚೆಗೆ ಬ್ಯಾರಿ ಇಲ್ಮ್ ಸೆಂಟರ್ ಸಭಾಂಗಣದಲ್ಲಿ ಅಧ್ಯಕ್ಷ ಜನಾಬ್ ಡಾ :ಹಾಜಿ ಅಬ್ದುಲ್ ಹಮೀದ್ ರವರ ನೇತೃತ್ವದಲ್ಲಿ ನಡೆಯಿತು.
2023-2026 ರ ತ್ರೈವಾರ್ಷಿಕ ಆಯವ್ಯಯ ಲೆಕ್ಕವನ್ನು ಪ್ರಧಾನ ಕಾರ್ಯದರ್ಶಿಗಳಾದ, ಜನಾಬ್ ಹಾಜಿ ಹುಸೇನ್ ಸಿರಾಜ್ ರವರು ಮಂಡಿಸಿದರು. ಸದಸ್ಯರ ಸರ್ವಾನುಮತದ ಅನುಮೋದನೆ ಯೊಂದಿಗೆ 2026-2029ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಜನಾಬ್ ಸವಾದ್ ಮುಹಮ್ಮದ್ ಕುಂಞ ಉಜಿರೆ, ಉಪಾಧ್ಯಕ್ಷರುಗಳಾಗಿ ಅಡ್ವೋಕೇಟ್ ಅಬ್ದುಲ್ ಲತೀಫ್, ಹಾಗೂ ಮುಹಮ್ಮದ್ ಯೂಸುಫ್ ಇಡ್ಯಾ, ಪ್ರಧಾನ ಕಾರ್ಯದರ್ಶಿಗಳಾಗಿ ಅಹ್ಮದ್ ಶರೀಫ್ ವಗ್ಗ, ಜೊತೆ ಕಾರ್ಯದರ್ಶಿಗಳಾಗಿ ರಿಯಾಝ್ ಮೆಲ್ಕಾರ್, ಹಾಗೂ ಹಸೈನಾರ್ ಡಿಲೈಟ್, ಕೋಶಾಧಿಕಾರಿಯಾಗಿ ರಿಝ್ವಾನ್ ಮೈಂದಾಳ ಹಾಗೂ ಪ್ರಧಾನ ಲೆಕ್ಕಪರಿಶೋಧಕರಾಗಿ ನಾಸರ್ ಹುಸೇನ್ ಎಮ್.ಪಿ. ಹಾಗೂ 15 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹುಸೈನ್ ಸಿರಾಜ್ ಧನ್ಯವಾದವಿತ್ತರು.













