ಬೆಂಗಳೂರು: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಎರಡು ದಿನಗಳ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್ ಮತ್ತು ಮರ್ಮ ಚಿಕಿತ್ಸಾ ಕಾರ್ಯಗಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ ಎಂದು ಬಸವ ಅಕ್ಯೂ ಅಕಾಡೆಮಿ ಸದಸ್ಯ ಸುಕೇಶ್ ಜೈನ್ ಅಳದಂಗಡಿ ತಿಳಿಸಿದ್ದಾರೆ.

ಬಸವ ಅಕ್ಕೂ ಅಕಾಡೆಮಿ ಸಂಸ್ಥಾಪಕರಾದ ಡಾ. ಕೆ. ಬಸವರಾಜುರವರ ನೇತೃತ್ವದಲ್ಲಿ “ಮನೆ ಮನೆಯಲ್ಲೂ ವೈದ್ಯರಾಗುವ ಕನಸಿನೊಂದಿಗೆ” ಜೂ. 19 ಮತ್ತು 20 ರಂದು ಟಿ.ಇ.ಎಂ. ಕಲಿತಿರುವ ವಿದ್ಯಾರ್ಥಿಗಳಿಗಾಗಿ ಆಫ್ಲೈನ್ನಲ್ಲಿ ಎರಡು ದಿನ ನಡೆಯುವ ನೈಸರ್ಗಿಕ ಚಿಕಿತ್ಸಾ ವಿಧಾನವಾದ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್, ಮರ್ಮ ಚಿಕಿತ್ಸೆ, ಸೀಡ್ ಥೆರಪಿ, ದೇಹದ ಪ್ರಮುಖ ಅಕ್ಯೂಪ್ರೆಜರ್ ಪಾಯಿಂಟ್ ಪರಿಚಯ, ಕಲರ್ ಥೆರಪಿ, ದೇಹದಲ್ಲಿ ಎನರ್ಜಿ ಸಮತೋಲನ ಮಾಡುವುದು, ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳ ಬಗ್ಗೆ ಚಿಕಿತ್ಸಾ ಕಾರ್ಯಗಾರವನ್ನು ಅಂಬೇಡ್ಕರ್ ಭವನ, ಮಿಲ್ಲರ್ ರಸ್ತೆ, ಭಗವಾನ್ ಮಹಾವೀರ್ ಆಸ್ಪತ್ರೆ ಹತ್ತಿರ, ವಸಂತ ನಗರ, ಬೆಂಗಳೂರಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಏರ್ಪಡಿಸಲಾಗಿದೆ
ಕರ್ನಾಟಕಾದ್ಯಂತ ಎಲ್ಲಾ ಜಿಲ್ಲೆಗಳಿಂದ ಆಸಕ್ತಿಯುಳ್ಳ ಟಿ.ಇ.ಎಂ. ವಿದ್ಯಾರ್ಥಿಗಳು ಈ ಕಾರ್ಯಗಾರಕ್ಕೆ ಆಗಮಿಸಿ ಕಾರ್ಯಗಾರದ ಉಪಯೋಗ ಪಡೆಯಲು ಬಸವ ಅಕ್ಯು ಅಕಾಡೆಮಿ ಕೊರುತ್ತಿದೆ. ಹೆಚ್ಚಿನ ಮಾಹಿತಿಗಾಗಿ : 9606496408, 9606496409, 8088139861 ಸಂಪರ್ಕಿಸಿ.













