June 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಮಂಜ ಶ್ರೀ ಸತ್ಯನಾರಾಯಣ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

ಉಜಿರೆ: ಶ್ರೀ ಸತ್ಯನಾರಾಯಣ ಮಕ್ಕಳ ಯಕ್ಷಗಾನ ಕಲಿಕಾ ಕೇಂದ್ರದಿಂದ ಪ್ರಸ್ತುತ ಶೈಕ್ಷಣಿಕ ವರ್ಷದ ತರಗತಿಯು ಆರಂಭಗೊಂಡಿದ್ದು ಯಕ್ಷಗಾನ ತರಗತಿ ಸಂಚಾಲಕರು, ಮಂಜುಶ್ರೀ ಪ್ರಿಂಟರ್ಸ್ ನ ನಿವೃತ್ತ ವ್ಯವಸ್ಥಾಪಕ ಶೇಖರ್ ಟಿ ಅವರ ವತಿಯಿಂದ ಮಕ್ಕಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.

ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ ಶೇಖರ್ ಟಿ. ಸಮವಸ್ತ್ರ ವಿತರಿಸಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಯಕ್ಷಗಾನ ಕಲಿಕೆಯು ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಪ್ರಜ್ಞೆ ಪುರಾಣೇತಿಹಾಸದ ತಿಳುವಳಿಕೆ, ಕಲಾಸಕ್ತಿ, ಪರಿಪಕ್ವ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.

ಈ ಯಕ್ಷ ಗುರುಗಳಾದ ಅರುಣ್ ಕುಮಾರ್, ಶಶಿಧರ್ ಕಲ್ಮಂಜ, ನಾಗೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಶೇಖರ್ ಟಿ. ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಯಕ್ಷಗಾನ ತರಬೇತಿಯು ಉಚಿತವಾಗಿದ್ದು ಪ್ರತೀ ಆದಿತ್ಯವಾರ ಬೆಳಿಗ್ಗೆ 8:30ರಿಂದ 10ರ ತನಕ ನಡೆಯುತ್ತದೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಧ್ಯಾನ ತರಬೇತಿ

Suddi Udaya

ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಮಲವಂತಿಗೆ ಗ್ರಾಮದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya

ಉಜಿರೆ: ಬ್ರಹ್ಮೋಪದೇಶದಲ್ಲಿ ಶರಸೇತು ಬಂಧನ ತಾಳಮದ್ದಳೆ

Suddi Udaya

ಮುಂಡಾಜೆ: ನಿವೃತ್ತ ಉಪನ್ಯಾಸಕ ಗೋಪಾಲಕೃಷ್ಣ ಡೋಂಗ್ರೆ ನಿಧನ 

Suddi Udaya

ಕುಂಟಿನಿ ಅಲ್-ಬುಖಾರಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Suddi Udaya

ಅನಾರೋಗ್ಯದಿಂದ ಕಾಶಿಪಟ್ಣದ ಯುವಕ ದೀಪಕ್ ಸಾಲಿಯಾನ್ ನಿಧನ

Suddi Udaya
error: Content is protected !!