23.8 C
ಪುತ್ತೂರು, ಬೆಳ್ತಂಗಡಿ
July 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡ್ಡಂದಡ್ಕ ಸರಿಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ವೇಣೂರು: ಪಡ್ಡoದಡ್ಕ ಶಾಲೆಯಲ್ಲಿ ಉಚಿತ ಬರೆಯುವ ಪುಸ್ತಕಗಳನ್ನು ಪೆರಿಂಜೆಯ ಸಾರಾ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ನ ವತಿಯಿಂದ ಜೂ.15 ರಂದು ವಿತರಿಸಲಾಯಿತು.

ಶಾಲಾ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ ಪಿಎಸ್ ಶಬ್ಬೀರ್ ವಹಿಸಿದ್ದರು. ಶಾಲಾ ಸ್ಥಾಪಕ ಸದಸ್ಯ ಶಂಕರ್ ಭಟ್ ಬಾಲ್ಯ ಮಾತಾಡಿ, ಈ ವರ್ಷದಿಂದ ಶಾಲೆಯಲ್ಲಿ ಎಲ್ ಕೆಜಿ ಯಿಂದ 5 ನೇ ತರಗತಿಯವರೆಗೆ ಆಂಗ್ಲ ತರಗತಿ ಆರಂಭವಾಗಿದ್ದು ಇಬ್ಬರು ಪದವೀಧರ ಟೀಚರ್ ನ್ನು ಸರಕಾರದ ವತಿಯಿಂದ ಮಂಜೂರು ಮಾಡಲಾಗಿದೆ. ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಹೆತ್ತವರು ದೂರದ ಇಂಗ್ಲಿಸ್ ಮೀಡಿಯಂ ಶಾಲೆಗೆ ಪ್ರತಿಷ್ಠೆಗೋಸ್ಕರ ಕಳಿಸದೆ ಊರಿನ ಶಾಲೆಗೆ ಕಳಿಸಿದರೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಸರಕಾರದ ಸೌಲಭ್ಯ ಮತ್ತು ಒಳ್ಳೆಯ ಸಂಸ್ಕಾರ ಸಿಗುತ್ತೆ ಎಂದರು.

ಸಾರಾ ಇಬ್ರಾಹಿಂ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಮಾತಾಡಿ, ಟ್ರಸ್ಟ್ ವಿದ್ಯೆ ಬಗ್ಗೆ ಪ್ರಥಮ ಆಧ್ಯತೆ ನೀಡಿತಿದ್ದು ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡು ಕಾರ್ಯಚರಿಸುತ್ತಿದೆ. ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಿದ್ದು ಸಂತೋಷವಾಗುತಿದೆ ಎಂದರು.
ಈ ಶಾಲಾ ಸ್ಥಾಪಕ ಸದಸ್ಯ ಇಸ್ಮಾಯಿಲ್ ಗಾಂಧಿನಗರ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಅರುಣ್ ಪೂಜಾರಿ ಜಾರಿಗೆದಡಿ, ಉಮರ್.ಕೆ, ರಹಿಮಾನ್ ಪೆರಿಂಜೆ ಮಾತಾಡಿದರು. ಮುಖ್ಯ ಶಿಕ್ಷಕಿ ಕಮಲಮ್ಮ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ರೇಖಾ, ಪೆರಿಂಜೆಯ ಬುಲೆಟ್ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಹಾಗೂ ಶಾಲಾ ಅಭಿವೃದ್ಧಿ ಯೋಜನೆಗಳಲ್ಲಿ ಸಹಕರಿಸಿದ ಜಾರಿಗೆದಡಿ ಅರುಣ್ ಪೂಜಾರಿಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿನೋದ ಕುಮಾರಿ ವಂದಿಸಿದರು.

Related posts

ಸೌತಡ್ಕದಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ: ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ

Suddi Udaya

ಅಳದಂಗಡಿ: ವಯೋವೃದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya

ಅಳದಂಗಡಿ: ಜೋಪಡಿಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆಸರೆಯಾದ ಅಳದಂಗಡಿ ಗ್ರಾ.ಪಂ ಪ್ರೇಮರವರ ಮನೆ ದುರಸ್ಥಿ, ಮೇಲ್ಛಾವಣಿಗೆ ಶೀಟ್ ಅಳವಡಿಕೆ, ಸುದ್ದಿ ಉದಯ ಪತ್ರಿಕೆಯ ವರದಿಗೆ ಸಾರ್ವಜನಿಕರಿಂದ ಮೆಚ್ಚುಗೆ

Suddi Udaya

ಫೆ.8: ಅಗ್ರಿಲೀಫ್ 2.0 – ‘ರೈತರ ಜೊತೆ ವಿಶ್ವದ ಕಡೆ’ ವಿಸ್ತೃತ ಘಟಕದ ಉದ್ಘಾಟನೆ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!