August 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಸುಗಳ ಅಭಿಯಾನ ಶಿಬಿರ

ಗೇರುಕಟ್ಟೆ : ನಾಳ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಸುಗಳ ಅಭಿಯಾನ ಮಾಹಿತಿ ಶಿಬಿರ ಜೂ.16 ರಂದು ಸಂಘದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಕೇಶವ ಪೂಜಾರಿ ಪಿ ನಾಳ ಇವರ ಮುತುವರ್ಜಿಯಲ್ಲಿ ನಡೆಯಿತು. ಶಿಬಿರದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇದರ ತಾಲ್ಲೂಕುವಾರು ಉಪ ವ್ಯವಸ್ಥಾಪಕರುಗಳಾದ ಡಾ. ಡಿ.ಆರ್ ಸತೀಶ್ ರಾವ್ ಸೂಕ್ತ ಸಲಹೆಗಳನ್ನು ಹೈನುಗಾರರಿಗೆ ನೀಡಿದರು. ಉಪ ವ್ಯವಸ್ಥಾಪಕ ಡಾ. ಗಣಪತಿ ಮಾಂಗ ಇವರು ಹಸುಗಳ ಬಂಜೆತನ ನೀವಾರಿಸಲು ಕೆಲವು ಸುಲಭವಾಗಿ ಸಿಗುವ ಹಳ್ಳಿ ಮದ್ದುಗಳನ್ನು ರೈತರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಸ್ತರಣಾಧಿಕಾರಿಗಳಾದ ರಾಜೇಶ್ ಪಿ ಕೆ ಮತ್ತು ಸಂದೀಪ್ ಭಾಗವಹಿಸಿದರು. ಈ ಅಭಿಯಾನ ಸಂಘದ ಸದಸ್ಯರು ಅದ ಜಯಚಂದ್ರ ಮುಂಚಲ್ಲಕ್ಕಿ ಮತ್ತು ರೋನಾಲ್ಡ್ ಮೋನಿಸ್ ಇವರ ಮನೆಯಲ್ಲಿ ಕೂಡ ನಡೆಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸೋಮಪ್ಪ ಗೌಡ, ನಿರ್ದೇಶಕರುಗಳಾದ ಸುಧಾಕರ ಮಜಲು, ಬಾಲಕೃಷ್ಣ ಶೆಟ್ಟಿ, ವಿಠಲ ಗೌಡ ಪಿ, ಜಗದೀಶ್ ಪೂಜಾರಿ, ಬೊಮ್ಮಣ ಗೌಡ, ರಮೇಶ ಶೆಟ್ಟಿ, ಶ್ರೀಧರ ಪೂಜಾರಿ, ಶ್ರೀಮತಿ ರೀತಾ ಪಿ ನಾಳ,ಶ್ರೀಮತಿ ವಿಜಯಾ ಮತ್ತು ಸಂಘದ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಎಂ ಹಾಗೂ ಸಿಬ್ಬಂದಿ ವರ್ಗ ಕೆ ವೆಂಕಪ್ಪ ಪೂಜಾರಿ, ಸವಿತಾ ಉಪಸ್ಥಿತರಿದ್ದರು.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ “ಅಕ್ಷಯ ಪಾಕಶಾಲೆ”- ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya

ಕಲಾಯಿತೊಟ್ಟು: ನಾಗರ ಪಂಚಮಿ ಪ್ರಯುಕ್ತ ನಾಗದೇವರ ಕಟ್ಟೆಯಲ್ಲಿ ಹಾಲಾಭಿಷೇಕ, ಪರ್ವ ಸೇವೆ

Suddi Udaya

ಕುತ್ಲೂರು ಸ.ಉ. ಪ್ರಾಥಮಿಕ ಶಾಲೆಗೆ ದಾನಿಗಳಿಂದ ಟೈ, ಬೆಲ್ಟ್, ಉಳಿತಾಯ ಖಾತಾ ಪುಸ್ತಕ ವಿತರಣೆ

Suddi Udaya

ರಂಜಿತ್ ಎಚ್ ಡಿ ಯವರಿಗೆ ಜೆಸಿಐ ವಲಯ 15ರ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

Suddi Udaya
error: Content is protected !!