ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಸಂಪತ್ ಆಚಾರ್ಯ ಅವರು ಕಾರ್ಕಳದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪತ್ ಅವರ ಎಡ ಕೈ ಗಂಭೀರ ಗಾಯಗೊಂಡ ಕಾರಣ ಸಂಪೂರ್ಣ ತೆಗೆಯಲಾಗಿದೆ. ತಲೆಗೆ ಬಲವಾದ ಗಾಯಗಳು ಆಗಿರುವ ಕಾರಣ ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುತ್ತಾರೆ.

ತೀರ ಬಡಕುಟುಂಬದ ಸಂಪತ್ ಅವರ ಮನೆಗೆ ಈಗ ಆಧಾರ ಸ್ತಂಭವಾಗಿ ಇರುವವರು ಸಹೋದರ ಸೂರ್ಯ ಆಚಾರ್ಯ ಅವರು. ಮನೆಯ ಪೂರ್ಣ ಜವಾಬ್ದಾರಿ ಹೊತ್ತು ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ ಅವರಿಗೆ ಸಹೋದರ ಸಂಪತ್ ಅವರ ಚಿಕಿತ್ಸೆಯ ವೆಚ್ಚಕ್ಕೆ ಅವರಿಂದ ಆಗುವ ವೆಚ್ಚವನ್ನು ಬರಿಸುತ್ತಿದ್ದಾರೆ. ಆದರೆ ಮುಂದಿನ ಒಟ್ಟು ಆಸ್ಪತ್ರೆಯ ವೆಚ್ಚ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಬೇಕಾಗಿರುವ ಕಾರಣ ಸಜ್ಜನರಾದ ತಾವೆಲ್ಲರೂ ತಮ್ಮ ಕೈಯಲ್ಲಿ ಆಗುವ ಸಹಾಯ ಮಾಡಬೇಕಾಗಿ ವಿನಂತಿಸಲಾಗಿದೆ. ಸಹಾಯ ಮಾಡುವವರು phone pay/ Gpay no: 9731020346













