September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಣ್ಯ ಇಲಾಖೆಯ ಸಹಯೋಗದಲ್ಲಿ ರಸ್ತೆ ನಿರ್ಮಾಣ ಆಗಲಿ :ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಪಶ್ಚಿಮ ಘಟ್ಟ ತಪ್ಪಲಿನ ಕುದುರೆಮುಖ ಅಭಯ ಅರಣ್ಯ ಪ್ರದೇಶ ಒಳಪಟ್ಟ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ದಿಡುಪೆ ಎಳನೀರು ಸಂಸೆ ಕಳಸ ರಸ್ತೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಿರ್ಮಾಣ ಆಗಲಿ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು, ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರಕ್ಕೆ ಅಗ್ರಹಿಸಿದ್ದಾರೆ.

ನಮ್ಮ ಸಮಾಜ ಬಾಂಧವರೇ ಹೆಚ್ಚಾಗಿ ಇರುವ ಪ್ರದೇಶ ಇದು. ವಿದ್ಯಾರ್ಥಿಗಳಿಗೆ ಕೃಷಿಕರಿಗೆ ಉದ್ಯೋಗಿಗಳಿಗೆ ಬೆಳ್ತಂಗಡಿ ತಾಲೂಕು ಸಂಪರ್ಕ ಒಂದು ದೊಡ್ಡ ದುರಂತ ಸವಾಲಿನ ಸಂಗತಿ. ರಾಷ್ಟ್ರದ ಅನೇಕ ಅರಣ್ಯ ಪ್ರದೇಶಗಳ ಪ್ರಕೃತಿ ರಮಣೀಯ ಸ್ಥಳ ವೀಕ್ಷಣೆ ವಿಹಾರ ರಸ್ತೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸುಂಕ ವಸೂಲಿ ಟಿಕೆಟ್ ಇತ್ಯಾದಿಗಳು ಮೂಲಕ ಆದಾಯ ಮಾಡುತ್ತಿರುವ ಸಂದರ್ಭದಲ್ಲಿ ಈ ರಸ್ತೆಯ ನಿರ್ಮಾಣಕ್ಕೂ ಇದೇ ಮಾದರಿಯಲ್ಲಾದರೂ ನಮಗೆ ರಸ್ತೆ ನಿರ್ಮಾಣ ಮೂಲಕ ಚಿಕ್ಕಮಗಳೂರು ದಕ್ಷಿಣ ಕನ್ನಡ ಜನತೆಯ ಸಂಪರ್ಕ ಕೊಂಡಿಯಾಗಬೇಕು. ಈ ಮೂಲಕ ಹೊರನಾಡು,ಕಳಸ ,ಶೃಂಗೇರಿ , ಧರ್ಮಸ್ಥಳ ದೇವಸ್ಥಾನ ಗಳಿಗೆ ಆಗಮಿಸುವ ಭಕ್ತರ. ಪ್ರಯಾಣಕ್ಕೂ ಅತೀ ಸಮೀಪ ರಸ್ತೆ ಜೊತೆ ಈ ಭಾಗದ ಜನತೆಯ ಆದಾಯ ಕೂಡ ಹೆಚ್ಚಾಗಲಿದೆ. ಅದ್ಭುತ ಪ್ರಕೃತಿ ರಮಣೀಯ ನೇತ್ರಾವತಿ ಉಗಮ ಸ್ಥಾನ ಜೊತೆ ಅನೇಕ ಸೌಂದರ್ಯ ಜಲಪಾತಗಳು ಇಲ್ಲಿವೆ. ಸರಕಾರ ಮನಸ್ಸು ಮಾಡಿ ಪ್ರವಾಸಿಗರ ಮನ ಸೆಳೆದು ಆದಾಯ ಹೆಚ್ಚಿಸಲು ತಾಲೂಕಿನ ಗೌರವ ಪ್ರಸಿದ್ದಿ ಹೆಚ್ಚಿಸಲು.. ವಿದ್ಯಾರ್ಥಿಗಳ. ಭವಿಷ್ಯ ದೃಷ್ಟಿ ಯಿಂದ ಆದರೂ ಈ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ದೊಡ್ಡ ಮನಸ್ಸು ಮಾಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರಕ್ಕೆ ವಿನಂತಿ ಮಾಡಿದ್ದಾರೆ.

ನೂತನ ಜಿಲ್ಲಾ ಸಂಸದ ಬ್ರಿಜೇಶ್ ಚೌಟರು ತಾಲೂಕಿನಲ್ಲಿ ನೂತನ ರಸ್ತೆಗಳಿಗೆ ಸಿಆರ್ ಎಫ್ ನಿಧಿಯಿಂದ ಅನುದಾನ ತಂದಿದ್ದಾರೆ ತಕ್ಷಣವೇ ಈ ಪ್ರದೇಶಕ್ಕೆ ಭೇಟಿ ನೀಡಿ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ವ್ಯಾಪ್ತಿಯವರೆಗಾದರೂ ರಸ್ತೆ ನಿರ್ಮಾಣ ಮಾಡಬೇಕು ಎಂದು ಅಗ್ರಹಿಸಿದ್ದಾರೆ.

Related posts

ಬಂದಾರು : ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಬಳಂಜ: 38 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಗುರುಪ್ರಸಾದ್ ಹೆಗ್ಡೆ,ಪ್ರ.ಕಾರ್ಯದರ್ಶಿಯಾಗಿ ಯಶೋಧರ ಶೆಟ್ಟಿ ಆಯ್ಕೆ

Suddi Udaya

ಜಾಗತಿಕ ಹಾದಿಯಲ್ಲಿ ಅಗ್ರಿಲೀಫ್‌ಗೆ ಭಾರೀ ಬಲ: ರೂ.10 ಕೋಟಿ ನಿಧಿ ಸಂಗ್ರಹ — ಭಾರತ ಮತ್ತು ಯುರೋಪ್–ಯುಕೆ ವಿಸ್ತರಣೆಗೆ ವೇಗ

Suddi Udaya

ಇಳಂತಿಲ: ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಉಜಿರೆ ಆಟೋ ಚಾಲಕರ ಮಹಾಸಭೆ

Suddi Udaya

ಅ.8-10: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದಿಂದ ಅಂತರಾಷ್ಟ್ರೀಯ ವಿಚಾರ ಸಂಕಿರಣ

Suddi Udaya
error: Content is protected !!