ಕಡಿರುದ್ಯಾವರ : ಇಲ್ಲಿಯ ಮಿತ್ತಕಟ್ಟಾಜೆ, ಜೋಡು ನೇರಳೆ ಪರಿಸರದಲ್ಲಿ ಒಂಟಿ ಸಲಗವು ಪತ್ರಕ್ಷಗೊಂಡ ಘಟನೆ ಜೂ. 18ರಂದು ರಾತ್ರಿ ನಡೆದಿದೆ.
ಮಿತ್ತಕಟ್ಟಾಜೆಯ ಪ್ರವೀಣ್ ಕುಮಾರ್ ಮೋಹನ್ ನಾಯ್ಕ, ಮಹೇಶ್ ಭಟ್ ಇವರ ಕೃಷಿ ಭೂಮಿಯಲ್ಲಿ ಸಂಚಾರ ಮಾಡಿರುತ್ತದೆ. ಅದೇ ರೀತಿ ಜೋಡು ನೇರಳೆ ಮಚ್ಚೇಂದ್ರನಾಯಕ್ ಇವರ ತೋಟದಲ್ಲಿರುವ ಹಲಸಿನ ಹಣ್ಣು ಇತ್ಯಾದಿ ವಸ್ತುಗಳನ್ನು ತಿಂದು ಕಾಡಿನ ಕಡೆಗೆ ತೆರಳಿದೆ. ಇದುವರೆಗೆ ಯಾವುದೇ ಕೃಷಿ ಹಾನಿಯ ಬಗ್ಗೆ ವರದಿಯಾಗಿಲ್ಲ.












