24.1 C
ಪುತ್ತೂರು, ಬೆಳ್ತಂಗಡಿ
June 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಲ್ಪಾಡಿ ಸ. ಕಿ. ಪ್ರಾ. ಶಾಲಾ ಮಂತ್ರಿ ಸಂಸತ್ ಚುನಾವಣೆ

ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿ ಯ ಶಾಲಾ ಸಂಸತ್ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ದ ಮಾದರಿಯಲ್ಲಿ ನಡೆಸಲಾಯಿತು.

ಶಾಲಾ ಮಕ್ಕಳಿಗೆ ಚುನಾವಣೆ ವ್ಯವಸ್ಥೆಯನ್ನು ಪರಿಚಯಿಸುವ ದೃಷ್ಟಿಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ನಡೆಸುವ ಎಲ್ಲಾ ಹಂತಗಳನ್ನು ಅನುಸರಿಸಲಾಯಿತು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತಗಟ್ಟೆ, ಸರತಿ ಸಾಲು, ಪೊಲೀಸ್ ವ್ಯವಸ್ಥೆ,ಮತಯಂತ್ರ, ಅಳಿಸಲಾಗದ ಶಾಯಿ ಬಳಕೆ, ಫಲಿತಾಂಶ ಘೋಷಣೆ ಇತ್ಯಾದಿ ಅಂಶಗಳ ಪ್ರಾತ್ಯಕ್ಷಿಕ ಮಾಹಿತಿ ನೀಡಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ 5ನೇ ತರಗತಿಯ ರಿಷಿಕಾ, ಉಪ ಮುಖ್ಯಮಂತ್ರಿಯಾಗಿ ಜೀವಿತ್ (5ನೇ), ವಿರೋಧ ಪಕ್ಷದ ನಾಯಕಿ ಯಾಗಿ ಅನುಷಾ(5ನೇ) ಆಯ್ಕೆಯಾದರು. ಉಳಿದಂತೆ ಶಾಲಾ ಶಿಕ್ಷಣ ಮತ್ತು ಆರೋಗ್ಯ ಮಂತ್ರಿಯಾಗಿ ಪ್ರೀತಮ್(5ನೇ), ಕ್ರೀಡಾ ಮಂತ್ರಿಯಾಗಿ ಅದ್ವಿತ್(5ನೇ), ನೀರಾವರಿ ಮಂತ್ರಿ ಯಾಗಿ ಅಭೀಷ್(4ನೇ) ಆಯ್ಕೆಯಾದರು. ಗ್ರಂಥಾಲಯ ಮತ್ತು ಸ್ವಚ್ಛತಾ ಮಂತ್ರಿಗಳ ಹೆಚ್ಚುವರಿ ಜವಾಬ್ದಾರಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ವಹಿಸಲಾಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಕರು ನಡೆಸಿಕೊಟ್ಟರು.

Related posts

ಧರ್ಮಸ್ಥಳ ಪ್ರಕರಣದಲ್ಲಿ ಸರಕಾರ ತುರ್ತು ನಿರ್ಧಾರ ಮಾಡಿದೆ : ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು: ಶಾಸಕ ಕಿಶೋರ್ ಕುಮಾರ್ ಪುತ್ತೂರು

Suddi Udaya

ಎ.ಬಿ.ಕೆ ಗಲ್ಫ್ ಕಮಿಟಿ ಕುದ್ರಡ್ಕ ವಾರ್ಷಿಕ ಮಹಾಸಭೆ ಹಾಗೂ “ಮೆಹ್ಫಿಲ್-ಈ-ಗಲ್ಫ್ ಮೀಟ್”

Suddi Udaya

ಆದಿವಾಸಿ ಸಮುದಾಯಗಳಿಗೆ ರಸ್ತೆ , ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಕ್ಷಿತ್ ಶಿವರಾಂ ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ

Suddi Udaya

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ಸದಾಶಿವ ಊರ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಆಯ್ಕೆ

Suddi Udaya

ಡಿ.21-22: ಬದನಾಜೆ ಶಾಲೆಯ ಅಮೃತ ಮಹೋತ್ಸವ ಸಂಭ್ರಮ: ಸುಜ್ಞಾನ ಸಭಾಂಗಣ ಲೋಕಾರ್ಪಣೆ

Suddi Udaya

ಮಡಂತ್ಯಾರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

Suddi Udaya
error: Content is protected !!