ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿ ಯ ಶಾಲಾ ಸಂಸತ್ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ದ ಮಾದರಿಯಲ್ಲಿ ನಡೆಸಲಾಯಿತು.
ಶಾಲಾ ಮಕ್ಕಳಿಗೆ ಚುನಾವಣೆ ವ್ಯವಸ್ಥೆಯನ್ನು ಪರಿಚಯಿಸುವ ದೃಷ್ಟಿಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ನಡೆಸುವ ಎಲ್ಲಾ ಹಂತಗಳನ್ನು ಅನುಸರಿಸಲಾಯಿತು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತಗಟ್ಟೆ, ಸರತಿ ಸಾಲು, ಪೊಲೀಸ್ ವ್ಯವಸ್ಥೆ,ಮತಯಂತ್ರ, ಅಳಿಸಲಾಗದ ಶಾಯಿ ಬಳಕೆ, ಫಲಿತಾಂಶ ಘೋಷಣೆ ಇತ್ಯಾದಿ ಅಂಶಗಳ ಪ್ರಾತ್ಯಕ್ಷಿಕ ಮಾಹಿತಿ ನೀಡಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ 5ನೇ ತರಗತಿಯ ರಿಷಿಕಾ, ಉಪ ಮುಖ್ಯಮಂತ್ರಿಯಾಗಿ ಜೀವಿತ್ (5ನೇ), ವಿರೋಧ ಪಕ್ಷದ ನಾಯಕಿ ಯಾಗಿ ಅನುಷಾ(5ನೇ) ಆಯ್ಕೆಯಾದರು. ಉಳಿದಂತೆ ಶಾಲಾ ಶಿಕ್ಷಣ ಮತ್ತು ಆರೋಗ್ಯ ಮಂತ್ರಿಯಾಗಿ ಪ್ರೀತಮ್(5ನೇ), ಕ್ರೀಡಾ ಮಂತ್ರಿಯಾಗಿ ಅದ್ವಿತ್(5ನೇ), ನೀರಾವರಿ ಮಂತ್ರಿ ಯಾಗಿ ಅಭೀಷ್(4ನೇ) ಆಯ್ಕೆಯಾದರು. ಗ್ರಂಥಾಲಯ ಮತ್ತು ಸ್ವಚ್ಛತಾ ಮಂತ್ರಿಗಳ ಹೆಚ್ಚುವರಿ ಜವಾಬ್ದಾರಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ವಹಿಸಲಾಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಕರು ನಡೆಸಿಕೊಟ್ಟರು.












