26.1 C
ಪುತ್ತೂರು, ಬೆಳ್ತಂಗಡಿ
June 28, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಕೊಕ್ಕಡದಲ್ಲಿ ವಾಹನ ದಟ್ಟನೆಗೆ ಸವಾರರು ಹೈರಾಣು

ಬೆಳ್ತಂಗಡಿ: ಉಜಿರೆ ಪೆರಿಯಶಾಂತಿ ಸ್ಪರ್ ರಸ್ತೆಯ ಕಾಪಿನಬಾಗಿಲಿನಿಂದ ಕೊಕ್ಕಡ ಜಂಕ್ಷನ್ ತನಕ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಬಸವಳಿದ ಬಗ್ಗೆ ಜೂ. 28 ರಂದು ವರದಿಯಾಗಿದೆ.

ವಾರಂತ್ಯದ ಹಾಗೂ ಸರಣಿ ರಜೆಯಿಂದ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಯಾತ್ರರ್ಥಿಗಳ ಸಂಖ್ಯೆ ಹೆಚ್ಚಿದ ಕಾರಣ ಕೊಕ್ಕಡ ಪೇಟೆಯಿಂದ ಕಾಪಿನಬಾಗಿಲಿನವರೆಗೆ ರಸ್ತೆಯ ಎರಡು ಬದಿ ವಾಹನ ದಟ್ಟನೆಯಿಂದ ಗಂಟೆಗಟ್ಟಲೆ ಪ್ರಯಾಣಿಕರು ಜಡಿ ಮಳೆಯೊಂದಿಗೆ ರಸ್ತೆ ನಡುವೆ ಸಿಲುಕಿಕೊಂಡಿದ್ದರು. ಬೆಂಗಳೂರು, ಹಾಸನ ಭಾಗದ ಬಸ್ ಗಳು, ಟೂರಿಸ್ಟ್ ವಾಹನ, ಆ ಭಾಗದ ಗ್ರಾಮೀಣ ಪ್ರದೇಶದ ಜನರು ತೀವ್ರ ಸಂಕಷ್ಟ ಅನುಭವಿಸಿದರು.

ಸೌತಡ್ಕ ಮಹಾಗಣಪತಿ ಕ್ಷೇತ್ರಕದ ದ್ವಾರದ ಬಳಿ ಟ್ರಾಫಿಕ್ ಕಿರಿಕಿರಿ ಉಂಟಾಗಿ ಆ ಕಡೆಯಿಂದ ಬರುವ ಹಾಗೂ ಹೋಗುವ ವಾಹನಳು ಆಚೆ ಇಚೆ ಹೋಗಲಾರದೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಾಕಿಗೊಂಡಿತ್ತು. ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ಪೊಲೀಸರು ಇಲ್ಲದೇ ಬಸ್ ನಿರ್ವಹಾಕರು ಸಾರ್ವಜನಿಕರು ಕ್ಲಿಯರ್ ಮಾಡಬೇಕಾದ ಪರಿಸ್ಥಿತಿ ಇದೆ ಹಾಗಾಗಿ ಪೊಲೀಸ್ ಇಲಾಖೆ ಇಲ್ಲಿಗೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆಚ್ಚಿನ ವಾರಂತ್ಯದಲ್ಲಿ ಕೊಕ್ಕಡ ಪೇಟೆ ಟ್ರಾಫಿಕ್ ಜಾಮ್ ಗೆ ಒಳಗಾಗುತ್ತಿದೆ. ಇಂದು ಹಾಲು ತರಲು ಪೇಟೆಗೆ ಹೋದಲ್ಲಿ ವಾಹನ ದಟ್ಟನೆಯಿಂದ ಒಂದು ಗಂಟೆ ಬಳಿಕ ಮನೆ ಸೇರುವ ಪರಿಸ್ಥಿತಿ, ಪ್ರತಿ ಭಾರಿ ಸಮಸ್ಯೆ ಎದುರಿಸುತ್ತಿದ್ದೇವೆ ಎನ್ನುತ್ತಾರೆ ಸಾರ್ವಜನಿಕರು.

Related posts

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ನೂತನ ಡಿವೈಎಸ್‌ಪಿ ಅವರನ್ನು ಭೇಟಿ ಮಾಡಿ ತಾಲೂಕಿಗೆ ಸ್ವಾಗತಿಸಿದ ಮುಸ್ಲಿಂ ಒಕ್ಕೂಟದ ಮುಖಂಡರು

Suddi Udaya

ಅ.22 ಬಳಂಜ ಶಾರದೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದ ಸತೀಶ್ ರೈ ಬಾರ್ದಡ್ಕಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಹಾಗೂ ಊರ ಮಹನೀಯರ ಸಹಕಾರದೊಂದಿಗೆ ವಿಜೃಂಭಣೆಯ ಶಾರದೋತ್ಸವಕ್ಕೆ ತಯಾರಿವೈಭವದ ಮೆರವಣಿಗೆ, ಆಟೋಟ ಸ್ಪರ್ಧೆಗಳು,500 ಭಜಕರಿಂದ ಭಜನೆ,ಸಾಂಸ್ಕೃತಿಕ ವೈಭವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರ 80ನೇ ವರ್ಷದ ಹುಟ್ಟುಹಬ್ಬ: ಬಿನುತಾ ಬಂಗೇರರವರ ಸಾರಥ್ಯದಲ್ಲಿ,ಬಂಗೇರ ಬ್ರಿಗೇಡ್ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

Suddi Udaya

ವೇದಮೂರ್ತಿ ಶಂಭು ಭಟ್ ಚಾವಡಿಬಾಗಿಲು ಇವರಿಗೆ “ಹವ್ಯಕ ವೇದ ರತ್ನ” ಪ್ರಶಸ್ತಿ ಪ್ರದಾನ

Suddi Udaya

ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಮೊಟ್ಟೆ ಕೋಳಿ ತರಬೇತಿ ಕಾರ್ಯಾಗಾರ

Suddi Udaya
error: Content is protected !!