ಶಿಶಿಲ: ಇಲ್ಲಿಯ ಕಾಲೋನಿಯಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಮರ ಬಿದ್ದು ವಾಹನ ಸವಾರರಿಗೆ ತೊಂದರೆಯುಂಟಾದ ಘಟನೆ ಜು. 6 ರಂದು ನಡೆದಿದೆ.


ಮರ ಬಿದ್ದ ಪರಿಣಾಮ ವಿದ್ಯುತ್ ತಂತಿಗೆ ಹಾನಿಯಾಗಿದ್ದು ಕೂಡಲೇ ಶಿಶಿಲ ಅರಸಿನಮಕ್ಕಿ ಘಟಕದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕಿರಣ್ , ಸುರೇಶ, ಹರೀಶ, ಕೃಷ್ಣಪ್ಪಗೌಡ, ನಾರಾಯಣ, ಕರುಣಾಕರ, ಬಾಲಕೃಷ್ಣ ಸುಂದರ ಕೆ ಮರವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.














