July 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ: ಸ್ವಾಗತ ಸಮಿತಿ ರಚನೆ

ಬೆಳ್ತಂಗಡಿ : ದಾರುಸ್ಸಲಾಂ ಸೆಂಟರ್ ಬೆಳ್ತಂಗಡಿ ಇದರ 10ನೇ ವಾರ್ಷಿಕೋತ್ಸವ ಹಾಗೂ ಪ್ರಥಮ ಸನದುದಾನ ಸಮಾರಂಭವು ಬೆಳ್ತಂಗಡಿ ಶಂಸುಲ್ ಉಲಮಾ ನಗರದಲ್ಲಿ 2026 ಡಿಸೆಂಬರ್ 17 ರಿಂದ 20 ರ ತನಕ “ದಿಶೆ ತೋರಿದ ದಶ ವರ್ಷಗಳು …” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿದ್ದು ಇದರ ಸ್ವಾಗತ ಸಮಿತಿ ರೂಪೀಕರಣವು ಮಿತ್ತಬೈಲ್ ನ ಮುಹಿಯ್ಯುದ್ದೀನ್ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು.

ದಾರುಸ್ಸಲಾಂ ಸೆಂಟರ್ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಸಭೆಯ ನೇತೃತ್ವ ವಹಿಸಿದ್ದರು.
ದಾರುಸ್ಸಲಾಂ ಸೆಂಟ್ರಲ್ ಕಮಿಟಿ ಜೊತೆ ಕಾರ್ಯದರ್ಶಿ ಹಮೀದ್ ಕಣ್ಣೂರು ಸಭೆಯಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು. ಮಿತ್ತಬೈಲ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಝ್ಝಕ್ ನಿಝಾಮಿ ಸಭೆಯನ್ನು ಉದ್ಘಾಟಿಸಿದರು.

ಸ್ವಾಗತ ಸಮಿತಿಯ ನಿರ್ದೇಶಕರಾಗಿ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್, ಶೈಖುನಾ ಸುಲೈಮಾನ್ ಫೈಝಿ ಚುಂಗತ್ತರ, ಸಯ್ಯಿದ್ ಅಸ್ಗರ್ ಅಲೀ ತಂಙಳ್ ಯು.ಎ.ಇ, ಗೌರವಧ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಅಧ್ಯಕ್ಷರಾಗಿ ಸಾಗರ್ ಮುಹಮ್ಮದ್ ಹಾಜಿ ಮಿತ್ತಬೈಲ್, ಕಾರ್ಯಾಧ್ಯಕ್ಷಯಾಗಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಪ್ರಧಾನ ಸಂಚಾಲಕರಾಗಿ ಡಿ.ಡಿ ಅಬ್ದುಲ್ ರಝ್ಝಕ್ ಹಾಜಿ ಕನ್ನಡಿಕಟ್ಟೆ, ಕೋಶಾಧಿಕಾರಿಯಾಗಿ ರಫೀಕ್ ಗಂಡಿಬಾಗಿಲು, ವರ್ಕಿಂಗ್ ಕನ್ವೀನರಾಗಿ ಅಬ್ದುಲ್ ಅಝೀಝ್ ಅಶ್ಶಾಫೀ,
ಉಪಾಧ್ಯಕ್ಷರಾಗಿ ಮೂಸಾ ದಾರಿಮಿ ಕಕ್ಕಿಂಜೆ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಸಾಗರ್ ಮಜೀದ್ ಹಾಜಿ, ಸಿ.ಕೆ ಇಬ್ರಾಹಿಂ ಹಾಜಿ ಮೂಡಿಗೆರೆ, ಝುಬೈರ್ ದಾರಿಮಿ ಪೈಕ, ಅಹ್ಮದ್ ಹುಸೈನ್ ಮೂಡಬಿದ್ರೆ, ಸಹ ಸಂಚಾಲಕರಾಗಿ ರಫೀಕ್ ಫೈಝಿ ಕನ್ಯಾನ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಅಯ್ಯುಬ್ ಕರಾಯ, ರಫೀಕ್ ಹೊಸಂಗಡಿ, ಶಾಕಿರ್ ರಾಜಧಾನಿ,ಯೂಸುಫ್ ಪೊಂಜಿಲ, ಮಜೀದ್ ಸರ್ ಮೆಲ್ಕಾರ್, ಫೈನಾನ್ಸಿಯಲ್ ಅಧ್ಯಕ್ಷರಾಗಿ ಲತೀಫ್ ಫೈಝಿ ಸುಂಕದಕಟ್ಟೆ, ಕನ್ವೀನರಾಗಿ ಅಶ್ರಫ್ ಮರೋಡಿ ಕೋಶಾಧಿಕಾರಿಯಾಗಿ ಯು.ಕೆ ಮೋನು ಕಕ್ಕಿಂಜೆ ನಿರ್ವಾಹಕ ಸಮಿತಿಯ ಅಧ್ಯಕ್ಷರಾಗಿ ಅಝೀಝ್ ಕಿಡ್ಸ್, ಸಂಚಾಲಕರಾಗಿ ಶರೀಫ್ ಕಲಾಯಿ, ಸಿರಾಜ್ ಚಿಲಿಂಬಿ ಅತಿಥಿ ಸ್ವೀಕಾರ ಸಮಿತಿಯ ಅಧ್ಯಕ್ಷರಾಗಿ ಬಶೀರ್ ದಾರಿಮಿ ನಾವೂರು, ಸಂಚಾಲಕರಾಗಿ ಅಬ್ದುಲ್ ರಹಿಮಾನ್ ಹಾಜಿ ಸಿಟಿ ಲ್ಯಾಂಡ್, ಸ್ವಯಂ ಸೇವಕರ ಸಮಿತಿಯ ಅಧ್ಯಕ್ಷರಾಗಿ ಲತೀಫ್ ಕರಾಯ, ಸಂಚಾಲಕರಾಗಿ ಲತೀಫ್ ಪಾಂಡವರಕಲ್ಲು ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ನಿಯಾಝ್ ನಿಝಾಮಿ ಪರಪ್ಪು, ಮುಹಮ್ಮದ್ ಇಸ್ಹಾಕ್ ಕೌಸರಿ ಪರ್ಲೋಟ್ಟು ಹಾಗೂ ಇತರೆ ವಿಭಾಗದ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಝಕರಿಯಾ ಫೈಝಿ ಮಾಡನ್ನೂರು ವಂದಿಸಿದರು.

Related posts

ಬೆಳ್ತಂಗಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತ‌ರ್ ಕಾಲೇಜು ಮಟ್ಟದ ಖೋ-ಖೋ ಪಂದ್ಯಾಟ

Suddi Udaya

ದ. ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ: ಡಾ.ಹೆಗ್ಗಡೆಯವರಿಂದ ಸಮ್ಮೇಳನದ ಲಾಂಛನ ಬಿಡುಗಡೆ

Suddi Udaya

ನಾವೂರು ಜನಸ್ಪಂದನ ಸಭೆ: ಜೆಜೆಎಂ ಕಾಮಗಾರಿ ಸಮರ್ಪಕವಾಗಿಲ್ಲ , ಬೆಳೆ ವಿಮೆ ಜಮೆ ಕುರಿತು ಚರ್ಚೆ

Suddi Udaya

ಕೊಯ್ಯೂರು- ಗೇರುಕಟ್ಟೆ ಮೂಲಕ ಬೆಳ್ತಂಗಡಿಗೆ ಬಸ್ಸು ಸೌಕರ್ಯಕ್ಕೆ ಮನವಿ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ

Suddi Udaya

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

Suddi Udaya
error: Content is protected !!