August 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆಟೋರಿಕ್ಷಾ ಕಾರ್ಮಿಕರ ಬದುಕು ಉಳಿಸಲು ದರ ಪರಿಷ್ಕರಣೆ ಅನಿವಾರ್ಯ: ಬಿ.ಎಂ.ಎಸ್

ಮಂಗಳೂರು: ಆಟೋರಿಕ್ಷಾ ಚಾಲಕ-ಮಾಲಕರು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟವನ್ನು ಗಮನಿಸಿ, ತಕ್ಷಣ ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಬೇಕು ಎಂದು ಭಾರತೀಯ ಮಜ್ದೂರ್ ಸಂಘ (BMS) ಆಗ್ರಹಿಸಿತು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ, ಭಾರತೀಯ ಮಜ್ದೂರ್ ಸಂಘ (BMS) ಸಂಯೋಜಿತ ಮೋಟಾರ್ ಮತ್ತು ಜನರಲ್ ಮಜ್ದೂರ್ ಸಂಘದ ಪರವಾಗಿ ಜಿಲ್ಲಾ ಅಧ್ಯಕ್ಷ ವಕೀಲರಾದ ಅನಿಲ್ ಕುಮಾರ್ ಯು. ಅವರು ಸಂಘದ ನಿಲುವನ್ನು ಸಮಗ್ರವಾಗಿ ಮಂಡಿಸಿದರು.

, ಕಳೆದ ಹಲವು ವರ್ಷಗಳಿಂದ ಆಟೋರಿಕ್ಷಾ ಬಾಡಿಗೆ ದರ ಪರಿಷ್ಕರಣೆಯಾಗದಿದ್ದರೂ ಇಂಧನ, LPG, CNG, ವಾಹನ ವಿಮೆ, ಫಿಟ್ನೆಸ್, ತೆರಿಗೆ, ಟೈರ್, ಟ್ಯೂಬ್, ಬ್ಯಾಟರಿ, ಸ್ಪೇರ್ ಪಾರ್ಟ್ಸ್ ಹಾಗೂ ವಾಹನ ನಿರ್ವಹಣಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗಿವೆ. ಇದರಿಂದ ಸಾವಿರಾರು ಆಟೋರಿಕ್ಷಾ ಕಾರ್ಮಿಕರ ಜೀವನೋಪಾಯ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ಕನಿಷ್ಠ ಬಾಡಿಗೆಯನ್ನು (1.5 ಕಿ.ಮೀ.) ₹50 ಹಾಗೂ ನಂತರದ ಪ್ರತಿ ಕಿಲೋಮೀಟರ್‌ಗೆ ₹30 ನಿಗದಿಪಡಿಸಬೇಕು. ಕಾಯುವ ದರ, ರಾತ್ರಿ ಬಾಡಿಗೆ ಹಾಗೂ ಲಗೇಜ್ ದರವನ್ನು ಪರಿಷ್ಕರಿಸಬೇಕು. ಗ್ರಾಮಾಂತರ ಮತ್ತು ಮಹಾನಗರ ಪ್ರದೇಶಗಳ ಕಾರ್ಯಾಚರಣಾ ವೆಚ್ಚ ಹಾಗೂ ಸೇವೆಯ ಸ್ವರೂಪ ಭಿನ್ನವಾಗಿರುವುದರಿಂದ ಪ್ರತ್ಯೇಕ ಬಾಡಿಗೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಇಂಧನ ದರ ಏರಿಕೆಗೆ ಅನುಗುಣವಾಗಿ ಸ್ವಯಂಚಾಲಿತ ದರ ಪರಿಷ್ಕರಣೆ ವ್ಯವಸ್ಥೆ ಜಾರಿಗೆ ತರಬೇಕು. LPG ಮತ್ತು CNG ಇಂಧನದ ನಿರಂತರ ಲಭ್ಯತೆಯನ್ನು ಖಚಿತಪಡಿಸಬೇಕು. ಟೈರ್, ಟ್ಯೂಬ್, ಬ್ಯಾಟರಿ, ಸ್ಪೇರ್ ಪಾರ್ಟ್ಸ್ ಹಾಗೂ ಇತರೆ ವಾಹನ ನಿರ್ವಹಣಾ ಸಾಮಗ್ರಿಗಳ ಮೇಲೆ ರಿಯಾಯಿತಿ ಅಥವಾ ಸಹಾಯಧನ ನೀಡಲು ಸಂಬಂಧಪಟ್ಟ ಇಲಾಖೆಗಳ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಬಿ.ಎಮ್.ಎಸ್ ಮನವಿ ಮಾಡಿತು.

ಆಟೋರಿಕ್ಷಾ ಚಾಲಕರು ಹೆಚ್ಚಿನ ಲಾಭವನ್ನು ಕೇಳುತ್ತಿಲ್ಲ; ತಮ್ಮ ದುಡಿಮೆಗೆ ತಕ್ಕ ನ್ಯಾಯಯುತ ಪ್ರತಿಫಲವನ್ನು ಮಾತ್ರ ಕೇಳುತ್ತಿದ್ದಾರೆ. ಕಾರ್ಮಿಕರ ಬದುಕು ಭದ್ರವಾದರೆ ಮಾತ್ರ ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಸಾರಿಗೆ ಸೇವೆ ಒದಗಿಸಲು ಸಾಧ್ಯ ಎಂದು ಅನಿಲ್ ಕುಮಾರ್ ಯು. ಹೇಳಿದರು.

ಸಭೆಯಲ್ಲಿ ಮಂಡಿಸಲಾದ ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು, ಎಲ್ಲಾ ಮನವಿಗಳನ್ನು ಸಮಗ್ರವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಬಿಎಮ್.ಎಸ್ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮನಿಹಳ್ಳ, ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ, ಬಂಟ್ವಾಳದ ಶ್ರೀಕಾಂತ್, ಪುತ್ತೂರಿನ ಹೇಮಂತ್ ಕುಮಾರ್, ಸಚಿನ್, ಸೀತಾರಾಮ್, ಬೆಳ್ತಂಗಡಿಯ ಕೃಷ್ಣ, ಪ್ರಶಾಂತ್, ವಸಂತ ವೇಣೂರು, ಮೂಡಬಿದ್ರೆಯ ದೀಪಕ್ ರಾಜ್, ನವೀನ್, ರಾಜೇಶ್, ಸುಳ್ಯದ ಪ್ರಕಾಶ್ ಎಂ.ಎಸ್., ನಾರಾಯಣ ಹಾಗೂ ಬಜ್ಪೆಯ ನಾಗೇಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಬಿ.ಎಮ್.ಎಸ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಭಾರತೀಯ ಮಜ್ದೂರ್ ಸಂಘವು ಆಟೋರಿಕ್ಷಾ ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಮುಂದೆಯೂ ಸಂಘಟಿತ ಹೋರಾಟ ಹಾಗೂ ರಚನಾತ್ಮಕ ಸಂವಾದವನ್ನು ಮುಂದುವರಿಸಲಿದೆ ಎಂದು ತಿಳಿಸಿದೆ.

Related posts

ಶಿರ್ಲಾಲು: ಎಸ್.ಐ ಆರ್ ಕೆಲಸಕ್ಕೆಂದು ತೆರಳಿದ್ದ ಮಹಿಳೆಗೆ ಜಾತಿ ನಿಂದನೆ: ಪ್ರಕರಣ ದಾಖಲು

Suddi Udaya

ವೇಣೂರು : ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಕಲ್ಮಂಜ ಗ್ರಾ.ಪಂ. ವತಿಯಿಂದ ನಿಡಿಗಲ್ ಸೇತುವೆಯಲ್ಲಿ ಸಿಸಿಟಿವಿ ಅಳವಡಿಕೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಹೊಸ ವಾಹನ , ಅತ್ಯಾಧುನಿಕ ವ್ಯವಸ್ಥೆ ಒಳಗೊಂಡ ವಾಹನ ಆಪತ್ತಿನ ಸೇವೆಗೆ ಸಜ್ಜಾಗಿದೆ

Suddi Udaya
error: Content is protected !!