29.8 C
ಪುತ್ತೂರು, ಬೆಳ್ತಂಗಡಿ
August 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ನವೀಕೃತಗೊಂಡ ಆರೋಗ್ಯ ವಿಮಾ ಯೋಜನೆಯ ವಿಭಾಗ ಲೋಕಾರ್ಪಣೆ     

ಉಜಿರೆ : NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ  ವಿನೂತನ ಮಾದರಿಯ ನವೀಕೃತಗೊಂಡ  ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿಂದ ವಿಭಾಗವನ್ನು ಜನಾರ್ಧನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ   ಶರತ್ ಕೃಷ್ಣ ಪಡವೆಟ್ನಾಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .

ಈ ಸಂದರ್ಭದಲ್ಲಿ  ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆಯನ್ನು ಪ್ರತಿಯೊಬ್ಬರು ಹೊಂದಿರಬೇಕು . ಆರೋಗ್ಯ ಹಾಳಾಗಲಿ ಎಂದು ವಿಮೆ ಮಾಡಿಸುವುದಲ್ಲ, ಅಯಾಚಿತವಾಗಿ  ಆರೋಗ್ಯ ಹದಗೆಟ್ಟಾಗ ಊರುಗೋಲಾಗಿ ಆರೋಗ್ಯ ವಿಮೆ ನಮ್ಮ ಸಹಾಯಕ್ಕೆ ಅನೂಕೂಲವಾಗುತ್ತದೆ, ಉಜಿರೆಯಂತ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಆರೋಗ್ಯ ಸೌಲಭ್ಯ ನೀಡುತ್ತಿರುವ  ಬೆನಕ ಹೆಲ್ತ್ ಸೆಂಟರ್ ನ ಕಾರ್ಯವೈಖರಿ ಶ್ಲಾಘನೀಯ . ಅತ್ಯಂತ ಸುಂದರವಾಗಿ  ಮತ್ತು ನವೀನ ಮಾದರಿಯಲ್ಲಿ ವಿಮಾ ವಿಭಾಗ ಸ್ಥಳಾಂತರಗೊಂಡಿದ್ದು , ಡಾ.ಗೋಪಾಲಕೃಷ್ಣ ಅವರ ಸೃಜನಶೀಲತೆ ಮತ್ತು ಉತ್ಸುಕತೆ ನಿಜಕ್ಕೂ ಪ್ರಶಂಶನೀಯವೆಂದು ಮೆಚ್ಚುಗೆಯ ನುಡಿಗಳನ್ನಾಡಿ ಶುಭ ಹಾರೈಸಿದರು .

ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿಗಳು , ಶರತ್ ಕೃಷ್ಣ  ಪಡವೆಟ್ನಾಯರನ್ನು ಶಾಲು ಹೊದಿಸಿ, ಹೂಗುಚ್ಛ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಸೀತಾರಾಮ್  ಭಟ್ ಕೆ , ಡಾ.ಭಾರತಿ ಜಿ ಕೆ , ಡಾ.ಆದಿತ್ಯ ರಾವ್ , ಡಾ.ಅಂಕಿತ ಜಿ ಭಟ್ , ಡಾ.ರೋಹಿತ್ ಜಿ ಭಟ್ , ಡಾ.ನವ್ಯ ಭಟ್, ಡಾ.ಶ್ರೇಯಸ್ ಮತ್ತು ಬೆನಕ ಆಸ್ಪತ್ರೆಯ  ಸಿಬ್ಬಂದಿಗಳು ಉಪಸ್ಥಿತರಿದ್ದರು.      

Related posts

ಉಜಿರೆ ಟಿ.ಬಿ ಕ್ರಾಸ್ ಬಳಿ ಚರಂಡಿಗೆ ಉರುಳಿದ ಪಿಕಪ್

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ಚಾಲನೆ: ಧ್ವಜಾರೋಹಣ, ಉತ್ಸವ ಬಲಿ, ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಕನ್ಯಾಡಿ ಸೇವಾನಿಕೇತನಕ್ಕೆ ಬೈಂದೂರು ಶಾಸಕರ ಭೇಟಿ

Suddi Udaya

ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ ಮಾಲಕ ಶಶಿಧರ್ ರಾವ್ ನಿಧನ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನಿಂದ ಕ್ರೀಡಾ ಉಪಕರಣಗಳ ಕೊಡುಗೆ

Suddi Udaya

ಸಾಮಾಜಿಕ ಜಾಲಾತಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ವಿರುದ್ಧ ನಿಂದನಾತ್ಮಕ ಹೇಳಿಕೆ ಪ್ರಸಾರ ಆರೋಪ : ಖಾಸಗಿ ವೆಬ್ ನ್ಯೂಸ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!