July 23, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಚಾರ್ಮಾಡಿ ಘಾಟಿಯಲ್ಲಿ ಚಿರತೆ: ವಾಹನ ಸವಾರರಲ್ಲಿ ಆತಂಕ

ಬೆಳ್ತಂಗಡಿ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಬುಧವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು ವಾಹನ ಸವಾರರಲ್ಲಿ ಆತಂಕ ಎದುರಾಗಿದೆ.


ಘಾಟಿಯ ಹನ್ನೊಂದನೇ ತಿರುವಿನ ಬಳಿ, ಬೇಲೂರು 62ಕಿ.ಮೀ.ಮೈಲಿಗಲ್ಲು ಇರುವಲ್ಲಿ ಚಿರತೆ ರಸ್ತೆ ಬದಿ ತಿರುಗಾಟ ನಡೆಸಿದೆ. ಇದಕ್ಕೆ ಮೊದಲು ಚಿರತೆ ತಡೆಗೋಡೆ ಪ್ರದೇಶದಲ್ಲಿ ಕುಳಿತಿತ್ತು. ಈ ಎರಡು ದೃಶ್ಯಗಳನ್ನು ವಾಹನ ಸವಾರರು ಚಿತ್ರೀಕರಿಸಿದ್ದಾರೆ. ಕಳೆದ ತಿಂಗಳು ಇಲ್ಲಿಂದ ಸುಮಾರು 6 ಕಿ.ಮೀ.ದೂರದ ಚಿಕ್ಕಮಗಳೂರು ವಿಭಾಗದ ಘಾಟಿ ಪ್ರದೇಶದ ರಸ್ತೆ ಬದಿಯ ತಡೆಗೋಡೆಯಲ್ಲಿ ಚಿರತೆ ಕಂಡುಬಂದಿತ್ತು. ಬಳಿಕ ಕಳೆದ ವಾರ ಚಾರ್ಮಾಡಿ ಘಾಟಿಗೆ ಸಮೀಪದ ನೆರಿಯದ ರಬ್ಬರ್ ತೋಟದಲ್ಲಿ ಚಿರತೆ ಓಡಾಟ ನಡೆಸಿತ್ತು.


ಚಾರ್ಮಾಡಿ ಘಾಟಿ ಭಾಗದಲ್ಲಿ ಕಾಡಾನೆಗಳ ತಿರುಗಾಟ ಸಾಮಾನ್ಯವಾಗಿದ್ದು ಇದೀಗ ಚಿರತೆಗಳ ಓಡಾಟವು ಕಂಡು ಬರುತ್ತಿದೆ. ಇದಲ್ಲದೆ ಹಲವಾರು ಹಾವುಗಳು ಇಲ್ಲಿನ ರಸ್ತೆ ವ್ಯಾಪ್ತಿಯಲ್ಲಿ ಆಗಾಗ ತಿರುಗಾಟ ನಡೆಸುತ್ತವೆ. ಕಾಡು ಹಂದಿ,ಜಿಂಕೆ ಇತ್ಯಾದಿ ಪ್ರಾಣಿಗಳ ಓಡಾಟ ಇಲ್ಲಿ ಸಾಮಾನ್ಯವಾಗಿದೆ.


ಘಾಟಿ ಭಾಗದಲ್ಲಿ ವಾಹನ ಸವಾರರು ಹೆಚ್ಚಿನ ಮುಂಜಾಗ್ರತೆಯಿಂದ ಸಂಚರಿಸಬೇಕು.ವನ್ಯಜೀವಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿ ಕೊಳ್ಳಬೇಕು. ವನ್ಯಜೀವಿಗಳಿಗೆ ತೊಂದರೆ ಉಂಟು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Related posts

ವಾಯ್ಸ್ ಆಫ್ ಮಲ್ನಾಡ್ ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಫೈನಲ್ ಹಂತ ತಲುಪಿದ ಬಂದಾರುವಿನ ಕುಸುಮ ಎಂ ಎಸ್

Suddi Udaya

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನಲ್ಲಿ ಸಿ.ಎ ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ : ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಸಮಿತಿ ಸಮಾಲೋಚನಾ ಸಭೆ

Suddi Udaya

ಧರ್ಮಸ್ಥಳ: ಆಕಸ್ಮಿಕ ಗ್ಯಾಸ್ ಸೋರಿಕೆ: ಸುಟ್ಟು ಕರಕಲಾದ ಅಡುಗೆ ಮನೆ

Suddi Udaya

ಯಕ್ಷಗಾನ ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲು

Suddi Udaya

ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಅಭಿನಂದನಾ ಸಭೆ

Suddi Udaya
error: Content is protected !!