
ಗುರುವಾಯನಕೆರೆ: ಬೆಳ್ತಂಗಡಿ ನಗರ ಪಂಚಾಯತು ವ್ಯಾಪ್ತಿಗೆ ಒಳಪಟ್ಟ ಕಂಚಿಂಜೆ ನಿವಾಸಿ ನಿವೃತ್ತ ಅಂಚೆಪಾಲಕ ರಾಮಚಂದ್ರ ರಾವ್ (66ವ) ಅವರು ಜು.29ರಂದು ಸಂಜೆ ನಿಧನರಾಗಿದ್ದಾರೆ. ಇವರು ಅಂಚೆ ಇಲಾಖೆಯಲ್ಲಿ ಪೋಸ್ಟ್ಮಾಸ್ಟರ್ ಆಗಿ ಸುಮಾರು 40ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು, ಇವರು ಪ್ರಗತಿ ಪರ ಕೃಷಿಕರಾಗಿದ್ದು, ದೈವಾರಾಧಕರಾಗಿ ಸ್ಥಳೀಯ ಪರಿಸರದಲ್ಲಿ ಎಲ್ಲರ ಪ್ರೀತಿ – ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಮೃತರು ಪತ್ನಿ, ಮಕ್ಕಳನ್ನು ಬಂಧು-ವರ್ಗದವರನ್ನು ಅಗಲಿದ್ದಾರೆ.ಅಭಿಮಾನಿಗಳನ್ನು ಕುಟುಂಬ ವರ್ಗದವರನ್ನು ಅಗಲಿದ್ದಾರೆ.












