September 13, 2026
ಧಾರ್ಮಿಕ

ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಉದ್ಘಾಟನೆ.


ವೇಣೂರು :ಕರಿಮಣೇಲು ಬೋಳೂರು ಶ್ರೀ ಮಹಮ್ಮಾಯಿ ದೇವಸ್ಥಾನ ಉತ್ತೂರ್ಲೊಟ್ಟುವಿನಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಸಹಯೋಗದೊಂದಿಗೆ ಭಜನಾ ಮಂಡಳಿ ಉದ್ಘಾಟನೆ,ಭಜನಾ ಮಾಹಿತಿ, ತಾಳ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಭಜನಾ ಗುರುಗಳಾದ ಸಂದೇಶ್ ಮದ್ದಡ್ಕ ರವರು ದೀಪ ಬೆಳಗಿಸಿ ಉದ್ಘಾಟಿಸಿ ಹಳ್ಳಿಗಳಲ್ಲಿ ಭಜನಾ ಕಾರ್ಯಕ್ರಮಗಳು ಇಡೀ ಊರಿನ ಜನರನ್ನು ಒಂದೆಡೆ ಸೇರಿಸುತ್ತವೆ. ಇದು ಗ್ರಾಮಸ್ಥರಲ್ಲಿ ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನ ಭಾವನೆಯನ್ನು ಹೆಚ್ಚಿಸುತ್ತದೆ ಎಂದರು.


ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರು ಭಜನೆಯು ಕೇವಲ ಭಕ್ತಿ ಮಾರ್ಗ ಅಥವಾ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಸಮಾಜದ ದೊಡ್ಡ ಪರಿವರ್ತನೆಗೆ ಶಕ್ತಿಶಾಲಿ ಮಾಧ್ಯಮವಾಗಿದೆ. ಇತಿಹಾಸದಲ್ಲಿ ಪುರಂದರದಾಸರು, ಕನಕದಾಸರು, ಮತ್ತು ಬಸವಣ್ಣನವರಂತಹ ಶರಣರು, ಸಂತರು ಭಜನೆ ಮತ್ತು ಕೀರ್ತನೆಗಳ ಮೂಲಕವೇ ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು.ಭಜನೆಗಳ ಸಾಹಿತ್ಯದಲ್ಲಿ ಕೇವಲ ದೇವರ ನಾಮ ಇರುವುದಿಲ್ಲ. ಬದಲಿಗೆ ಸತ್ಯ, ಪ್ರಾಮಾಣಿಕತೆ, ದುಶ್ಚಟಗಳಿಂದ ದೂರವಿರುವುದು, ಮತ್ತು ನೈತಿಕ ಮೌಲ್ಯಗಳ ಬಗ್ಗೆ ಸಂದೇಶಗಳಿರುತ್ತವೆ. ಇದು ಜನರ ಆಲೋಚನಾ ಶೈಲಿಯನ್ನು ಉತ್ತಮ ಪಥದತ್ತ ಬದಲಾಯಿಸುತ್ತದೆ. ದುರ್ಗಾಂಬಿಕಾ ಭಜನಾ ಮಂಡಳಿ ಮೂಲಕ ಸಮಾಜದಲ್ಲಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳು ನಡೆಯಲಿ ಎಂದರು.


ವೇದಿಯಲ್ಲಿ ಮಂಡಳಿಯ ಪ್ರಮುಖರಾದ ಕರ್ಣ,ರಾಘು ನಾಯ್ಕ್, ಪ್ರವೀಣ್ ಪಡ್ಲಾ, ದೋಗು ನಾಯ್ಕ್, ಜಾರಪ್ಪ ಪೂಜಾರಿ, ಭಾಸ್ಕರ ಪೂಜಾರಿ, ಹರಿಶ್ಚಂದ್ರ ನಾಯ್ಕ,ಸುಮ ಅಶೋಕ ನಾಯ್ಕ ಉಪಸ್ಥಿತರಿದ್ದರು. ಕುಮಾರಿ ಸುಪ್ರೀಯ ರವರು ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಥರು, ಭಜನಾ ಮಂಡಳಿ ಸದಸ್ಯರು, ಪೊಷಕರು ಭಾಗವಹಿಸಿದ್ದರು.

Related posts

ಕೇಳ್ತಾಜೆ: ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಜಾತ್ರಾಮಹೋತ್ಸವ: ಧಾರ್ಮಿಕ ಸಭೆ

Suddi Udaya

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ವತಿಯಿಂದ 15ನೇ ವರ್ಷದ ಶನಿಪೂಜೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಭವ್ಯ ಸ್ವಾಗತ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ 28ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!