23.8 C
ಪುತ್ತೂರು, ಬೆಳ್ತಂಗಡಿ
July 31, 2026
Uncategorizedನಿಧನ

ಪಟ್ರಮೆ ಗ್ರಾಮದ ಜಾಲು ನಿವಾಸಿ ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಲಕ್ಷ್ಮಣ ಗೌಡರು ನಿಧನ

ಬೆಳ್ತಂಗಡಿ : ಪಟ್ರಮೆ ಗ್ರಾಮದ ಜಾಲು ಎಂಬಲ್ಲಿರುವ ಸಿಪಿಐಎಂ ಪಕ್ಷದ ಹಿರಿಯ ಸಂಗಾತಿ ಲಕ್ಷ್ಮಣ ಗೌಡರು ಅಲ್ಪಕಾಲದ ಅನಾರೋಗ್ಯದ ಬಳಿಕ ತನ್ನ 70 ನೇ ವರ್ಷ ಪ್ರಾಯದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.
ಕಳೆದ ತಿಂಗಳು ಮೆದುಳಿನ ತೀವ್ರರಕ್ತಸ್ರಾವದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಹತ್ತು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದರು.
ಮೃತರು 10 ನೇ ತರಗತಿ ತನಕ ಓದಿ ನಂತರ 50 ವರ್ಷದ ಹಿಂದೆಯೇ ಮಂಗಳೂರಿನ ಹಂಚಿನ‌ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿ ಟೈಲ್ಸ್ ವರ್ಕರ್ಸ್ ಯುನಿಯನ್ (ಸಿಐಟಿಯು) ನ ಸ್ಥಾಪಕ ಸದಸ್ಯರಾಗಿದ್ದರು. ಅಲ್ಲೇ ಪಕ್ಷದ ಸದಸ್ಯರಾಗಿ ಸೇರಿದ ಅವರು ಬಳಿಕ 1996 ,ರಿಂದ ಪಕ್ಷದ ಪಟ್ರಮೆ ಗ್ರಾಮದ ಶಾಖೆಯ ಸದಸ್ಯರಾಗಿ ಪಕ್ಷದ‌ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಾ, ಯುವ ಸಂಗಾತಿಗಳಿಗೆ ಮಾರ್ಗದರ್ಶಕರೂ ಆಗಿದ್ದರು. ಮೃತರು ಪತ್ನಿ ಧರ್ನಮ್ಮ, ಮಗ ಯೋಗೀಶ್, ಮಗಳು ಕವಿತಾ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅವರಿಗೆ ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಗೌರವ ಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್ ತಿಳಿಸಿದ್ದಾರೆ.
ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ‌ ಎಂದಿರುವ‌ ಪಕ್ಷ, ಸಮಾಜದ ಕುರಿತಾಗಿನ ಅವರ ಆಶಯಗಳ ಈಡೇರಿಕೆಗೆ ಶ್ರಮಿಸುವುದೇ ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ ಎಂದರು.

Related posts

ಅಬೂಬಕ್ಕರ್ ಸಿದ್ದೀಕ್ ನಡ್ತೀಕಲ್ಲು ನಿಧನ

Suddi Udaya

ಪ್ರಸನ್ನ ಆಂ.ಮಾ. ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ ಬಸ್‌ ನಿಲ್ದಾಣದ ಬಳಿ ಅರಸಿನಮಕ್ಕಿಉಪ್ಪರಡ್ಕ ನಿವಾಸಿ ಬಾಲಕೃಷ್ಣ ಆಚಾರ್ಯರ ಮೃತದೇಹ ಪತ್ತೆ

Suddi Udaya

ವಾಣಿ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಉತ್ತಮ ಫಲಿತಾಂಶ: ವಿದ್ಯಾರ್ಥಿನಿ ನವಮಿ ಗೆ 588 ಅಂಕ

Suddi Udaya

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಿಲ್ಲದ ಕಾಡುಪ್ರಾಣಿಗಳ ಬೇಟೆ

Suddi Udaya

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ, ದಂತ ವೈದ್ಯ , ಡಾ.ರಾಜಾರಾಮ್ ಕೆಬಿ ಅವರಿಗೆ ಮಾತೃ ವಿಯೋಗ.ಗಿರಿಜಮ್ಮ ನಿಧನ

Suddi Udaya
error: Content is protected !!