32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿ.ಹಿಂ.ಪ. ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಗ್ರಾಮ ಸಮಿತಿ ವತಿಯಿಂದ ಕಳೆಂಜ ಗೋಶಾಲೆಗೆ ಗೋವಿಗಾಗಿ ಮೇವು

ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಘಟಕ ಹಾಗೂ ಮಂಜುಶ್ರೀ ಭಜನಾ ಮಂದಿರ ಮಂಜುಶ್ರೀ ನಗರ ಮುಂಡಾಜೆ ಇದರ ವತಿಯಿಂದ ನಂದಗೋಕುಲ ಗೋಶಾಲೆ ಕಳೆಂಜ ಕಾಯರ್ತಡ್ಕಕ್ಕೆ ಗೋವಿಗಾಗಿ ಮೇವು ವಿಶೇಷ ಕಾರ್ಯಕ್ರಮ ಜರಗಿತು.

ಎರಡು ಟೆಂಪೋ ದಲ್ಲಿ ಹಸಿರು ಹುಲ್ಲನ್ನು ಸಾಗಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಉಮೇಶ್ ಆಚಾರ್ಯ ಕಾನರ್ಪ, ಕಾರ್ಯದರ್ಶಿ ನಾರಾಯಣ ಶೆಟ್ಟಿ ಮಂಜುಶ್ರೀ ನಗರ, ಸದಸ್ಯರಾದ ಮಧು ಶೆಟ್ಟಿ ಹುರ್ತಜೆ, ದಿನೇಶ್ ಗೌಡ ಮಂಜುಶ್ರೀ ನಗರ, ಸದಾನಂದ ಬಿ ಮುಂಡಾಜೆ, ಶೇಖರ ಗೌಡ, ಭಜರಂಗದಳದ ಸಂಚಾಲಕರಾದ ಅನಂತ ಕುಂಟಾಳಫಲ್ಕೆ, ಮಾತೃಶಕ್ತಿ ಘಟಕದ ಪ್ರಮುಖ್ ರೇವತಿ ದಿನೇಶ್ ಆಚಾರ್ಯ, ರೋಹಿಣಿ, ಗುಲಾಬಿ ಸುಂದರ ಗೌಡ, ಸೀತಾ, ಹಾಗೂ ದುರ್ಗಾವಾಹಿನಿ ಘಟಕದ ಸಂಯೋಜಕಿ ಲೀಲಾವತಿ ಬಾಲಕೃಷ್ಣ ನಾಯ್ಕ್ , ಉಷಾ ದಿನೇಶ್ ಗೌಡ, ವಿಮಲಾ ಶೇಖರ ಗೌಡ ಭಾಗವಹಿಸಿದ್ದರು. ವಾಹನದ ವ್ಯವಸ್ಥೆಯನ್ನು ಪಂಚಶ್ರೀ ಗ್ರೂಪ್ ನಾರಾಯಣ ಗೌಡ ಕೊಳಂಬೆ, ಚೆನ್ನಕೇಶವ ನಾಯ್ಕ್ ಅರಸಮಜಲು ನಡೆಸಿದರು. ಕೃಷ್ಣ ಗೌಡ ಹುರ್ತಾಜೆ ಹುಲ್ಲನ್ನು ದಾನವಾಗಿ ನೀಡಿದರು.

Related posts

ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ:ಆಯೋಧ್ಯೆ ಶ್ರೀರಾಮ ಮಂದಿರ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ

Suddi Udaya

ಉಜಿರೆ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಪಾಲಕರ ಹಬ್ಬದ ಆಚರಣೆ

Suddi Udaya

ಉಜಿರೆಯಲ್ಲಿ ಬ್ಯೂಟಿ ಬ್ಲಂಡ್ ಸಲೂನ್ ಶುಭಾರಂಭ

Suddi Udaya

ಅ.25: ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ ಕೃತಿ ಲೋಕಾರ್ಪಣೆ, ಹಾಗೂ ತಾಳಮದ್ದಳೆ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಸೌತಡ್ಕಕ್ಕೆ ನಟಿ ರಚಿತಾ ರಾಮ್ ಭೇಟಿ

Suddi Udaya
error: Content is protected !!