ಕೊಯ್ಯೂರು: ಮಲೆಬೆಟ್ಟು ಮಹಾಗಣಪತಿ ದೇವಸ್ಥಾನದಲ್ಲಿ ಪ್ರೇರಣ ಸಂಜೀವಿನಿ ಒಕ್ಕೂಟ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಜೇನು ಕೃಷಿ ತರಬೇತಿಯು ಒಕ್ಕೂಟದ ಅಧ್ಯಕ್ಷೆ ವಿನುತ ರಜತ್ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಂಬಿಕೆ ಸಂಧ್ಯಾ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ಜೋಶಿ ಶಿರ್ಲಾಲು ಜೇನು ಕೃಷಿಯ ಮಹತ್ವ, ಜೇನು ಪೆಟ್ಟಿಗೆಯ ಸಂಪೂರ್ಣ ಮಾಹಿತಿ ಜೇನು ಕೃಷಿ ಮಾಡುವಾಗ ರೈತರು ಅನುಸರಿಸಬೇಕಾದ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕೃಷಿ ಇಲಾಖೆಯ ಬಿಟಿಎಂ ನವನೀತ, ಎಟಿಎಂ ಗಾಯತ್ರಿ , ಎಲ್ ಸಿ ಆರ್ ಪಿ ಶಾಶ್ವಿತ ಪಶುಸಖಿ ಏಕಲತಾ ಕೃಷಿ ಸಖಿ ಭಾಗೀರಥಿ ಹಾಜರಿದ್ದರು. 25 ರೈತರು ಇದರ ಪ್ರಯೋಜನವನ್ನು ಪಡೆದುಕೊಂಡರು ಕೃಷಿ ಸಖಿ ಧನ್ಯವಾದ ನೀಡಿದರು.













