28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಾರತ್ ಸ್ಕೌಟ್ಸ್ & ಗೈಡ್ಸ್ ವತಿಯಿಂದ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆ

ಧರ್ಮಸ್ಥಳ : ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ಸ್ಕಾರ್ಫ್ ದಿನಾಚರಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಪರಿಮಳ ಎಂ.ವಿ ಇವರಿಗೆ ಸ್ಕಾರ್ಫ್ ತೊಡಿಸಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಶಾಲಾ ಕಬ್ ಮಾಸ್ಟರ್ ಶ್ರೀಮತಿ ಅಮೃತಾ ವಿ.ಶೆಟ್ಟಿ ಇವರು ಸ್ಕಾರ್ಫ್ ದಿನದ ಮಹತ್ವ ವಿವರಿಸಿದರು. ಬಳಿಕ ಬನ್ನಿ ವಿದ್ಯಾರ್ಥಿಗಳಿಗೆ ಏಪ್ರಾನ್ ತೊಡಿಸಿ, ಹೊಸದಾಗಿ ಸೇರ್ಪಡೆಗೊಂಡ ಕಬ್ ಬುಲ್ ಬುಲ್ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ತೊಡಿಸಿ ಸ್ವಾಗತಿಸಲಾಯಿತು.

ಕಬ್ ಮಾಸ್ಟರ್ ಶ್ರೀಮತಿ ಹೇಮಾವತಿ ಕಬ್ ಹಾಗೂ ಬುಲ್ ಬುಲ್ ಪ್ರತಿಜ್ಞೆ ಹಾಗೂ ನಿಯಮ ಹೇಳಿದರು.ಸ್ಕೌಟ್ ಮಾಸ್ಟರ್ ಶ್ರೀಮತಿ ಶಶಿಕಲಾ ಸ್ಕೌಟ್ ಪ್ರತಿಜ್ಞೆ ಅನ್ನು ಬೋಧಿಸಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ದೀಕ್ಷಾ ನಿಯಮ ಬೋಧಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರು ಮಾತನಾಡುತ್ತಾ ಸ್ಕಾರ್ಫ್ ಮಹತ್ವ ಉದ್ದೇಶ ,ಸಮವಸ್ತ್ರದ ಮಹತ್ವ ಹಾಗೂ ಅದನ್ನು ಧರಿಸುವವರ ಕೆಲಸ ಕಾರ್ಯಗಳು ಜವಾಬ್ದಾರಿ,ಅದನ್ನು ನಿಭಾಯಿಸಬೇಕಾದ ಅಗತ್ಯತೆ ಹಾಗೂ ನಿರ್ವಹಿಸುವ ರೀತಿ ಹೇಗಿರಬೇಕು ಎಂಬುದನ್ನು ವಿವರಿಸಿದರು. ಕಾರ್ಯಕ್ರಮವನ್ನು ಕಬ್ ಮಾಸ್ಟರ್ ಶ್ರೀಮತಿ ಅಮೃತಾ ವಿ ಶೆಟ್ಟಿ ನಿರ್ವಹಿಸಿ, ಕಬ್ ವಿದ್ಯಾರ್ಥಿ ವಿಹಾನ್ ಮಯ್ಯ ಸ್ವಾಗತಿಸಿ,ಕಬ್ ವಿದ್ಯಾರ್ಥಿ ಅಚಿಂತ್ಯ ಧನ್ಯವಾದವಿತ್ತರು.

Related posts

ಎಸ್‌ಡಿಪಿಐ ಮೂರುಗೋಳಿ ಬ್ರಾಂಚ್ ಸಮಿತಿಯಿಂದ ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ

Suddi Udaya

ನಾರಾವಿ: ಸಂತ ಅಂತೋನಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿ ಜೆಸಿ ಸಪ್ತಾಹದಲ್ಲಿ ಡ್ರೀಮ್ ಡೀಲ್ ಗ್ರೂಪ್ ಎಂಡಿ ಮಹಮ್ಮದ್ ಸುಹೈಲ್‌ರವರಿಗೆ ಸನ್ಮಾನ

Suddi Udaya

ಶ್ರೀ ಧ.ಮಂ.ಭಜನಾ ಪರಿಷತ್ ಬೆಳ್ತಂಗಡಿ ವಲಯದ ಕಾರ್ಯದರ್ಶಿಯಾಗಿ ಸೂರಜ್ ಮೇಲಂತಬೆಟ್ಟು ಆಯ್ಕೆ

Suddi Udaya

ಮಂಗಳೂರಿನಲ್ಲಿ ಆನೆದಂತ ಮಾರಟಕ್ಕೆ ಯತ್ನ; ಪುದುವೆಟ್ಟು ಗ್ರಾಮದ ಶಶಾಂಕ ವಶಕ್ಕೆ

Suddi Udaya

ವಾಲಿಬಾಲ್ ಪಂದ್ಯಾಟದಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ತಂಗಡಿಯಲ್ಲಿ ಅದ್ದೂರಿ ಸ್ವಾಗತ

Suddi Udaya
error: Content is protected !!