
ಬೆಳ್ತಂಗಡಿ: ಬೆಳ್ತಂಗಡಿ ನಗರ ಮಾದರಿ ಶಾಲಾ ಬಳಿಯ ನಿವಾಸಿ ದಿ| ನಾರಾಯಣ ರಾವ್ ಅವರ ಧರ್ಮಪತ್ನಿ ಶ್ರೀಮತಿ ಕೆ.ಸುಮಿತ್ರ ನಾರಾಯಣ ರಾವ್ (99ವ) ಅವರು ಆ.5ರಂದು ನಿಧನರಾಗಿದ್ದಾರೆ.
ಅಪಾರ ದೈವ ಭಕ್ತರು ಹಾಗೂ ಹಿರಿಯರಾದ ಮೃತರು ಮುರಳಿಧರ ರಾವ್, ಲಕ್ಷ್ಮೀನಾರಾಯಣ ರಾವ್ ಸೇರಿದಂತೆ ಮೂರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.







