ಬೆಳ್ತಂಗಡಿ : ಭಾರಿ ಮಳೆಯಿಂದಾಗಿ ಕನ್ಯಾಡಿ ಗ್ರಾಮದ ಕೈಲಾಜೆ ನಿವಾಸಿಯಾಗಿರುವ ಇನಾಸ್ ಡಿಸೋಜ ಮತ್ತು ಜಾನ್ ಡಿಸೋಜ ಎಂಬುವರ ಮನೆ ಬಳಿ, ಗುಡ್ಡ ಕುಸಿತ ಸಂಭವಿಸಿದ್ದು ಪ್ರಸ್ತುತದ ವರೆಗೆ ವಾಸ್ತವ್ಯದ ಮನೆಗೆ ಯಾವುದೇ ಹಾನಿ ಸಂಭವಿಸಿರುವುದಿಲ್ಲ. ಮಳೆಯು ಇದೇ ರೀತಿ ಮುಂದುವರೆದರೆ ಇನ್ನಷ್ಟು ಗುಡ್ಡ ಕುಸಿಯುವ ಭೀತಿ ಇದೆ.







