ಉಜಿರೆ; 2025-26 ನೇ ಸಾಲಿನ ರಾಷ್ಟ್ರ ಮಟ್ಟದ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಆರನೇ ತರಗತಿಯ ಶಶಿಧರ್ ಹಾಗೂ ಸನ್ನಿಧಿ ಜಿ ಕುಲಾಲ್ ಏಳನೇ ತರಗತಿಯ ಕೃಷ್ಣತೇಜ ಮತ್ತು ಉತ್ತಮ್ ಎಂ ಕೆ., 9ನೇ ತರಗತಿಯ ಅನುಶ್ರೀ ಹೊಳ್ಳ 10ನೇ ತರಗತಿಯ ಸ್ಪೂರ್ತಿ ಎಸ್. ಸೇರಿದಂತೆ ಒಟ್ಟು ಆರು ವಿದ್ಯಾರ್ಥಿಗಳು ಬೆಂಗಳೂರಿನ ಮಹದೇವ ದೇಸಾಯಿ ಸಭಾಂಗಣ ಗಾಂಧಿ ಭವನದಲ್ಲಿ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ. ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಸಂಯೋಜಕರಾದ ಶಿಕ್ಷಕಿ ರೇಷ್ಮಾ ಇವರನ್ನು ಸನ್ಮಾನಿಸಲಾಯಿತು. ಈ 10ನೇ ವರ್ಷದ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಘಟಿಕೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ ಡಾಕ್ಟರ್ ಎಸ್ ಜೆ ಸುಶೀಲಮ್ಮ ಹಾಗೂ ಪ್ರೊ. ಶೋಭಾ ಜಿ ನಿರ್ದೇಶಕರು ಕಾಲೇಜ್ ಶಿಕ್ಷಣ ಇಲಾಖೆ ಬೆಂಗಳೂರು. ನಾಡೋಜ ಡಾ. ವೂಡೇ ಪಿ .ಕೃಷ್ಣ ಅಧ್ಯಕ್ಷರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ , ಗಿರೀಶ್ ಕುಲಕರ್ಣಿ ಪರೀಕ್ಷಾ ನಿಯಂತ್ರಣ ಅಧಿಕಾರಿ ಜಲಗಾಂ ಮಹಾರಾಷ್ಟ್ ಮತ್ತು ಡಾ. ಅಭಿದ ಬೇಗಂ ರಾಜ್ಯ ಸಂಯೋಜಕರು ಗಾಂಧೀ ವಿಚಾರ ಸಂಸ್ಕರಣ ಪರೀಕ್ಷೆ ಬೆಂಗಳೂರು ಇವರು ಭಾಗಿಗಳಾಗಿದ್ದರು.
ವಿದ್ಯಾರ್ಥಿಗಳನ್ನು ಹಾಗೂ ಶಾಲಾ ಶಿಕ್ಷಕಿಯನ್ನು ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ವಿದ್ಯಾ ಲಕ್ಷ್ಮಿ ಯವರು ಅಭಿನಂದಿಸಿದರು.













