
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಬೈರಾಪುರದವರೆಗಿನ ಪ್ರಸ್ತಾವಿತ ಘಾಟಿ
ರಸ್ತೆಗೆ ಆ.6 ಇಂದು ಜಂಟಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಜೇಕಬ್ ಎಲ್. ಅವರ ಸೂಚನೆ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಿ.ಎಂ ಜಿ.ಎಸ್. ವೈ ಮತ್ತು ಪಿ.ಎಂ -ಜನಮನ್ ಯೋಜನೆಯಡಿ ಅನುಮತಿ ಕೋರಿ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಯಿತು.
ನಿವೃತ್ತ ಇಂಜಿನಿಯರ್ ಎಚ್ ಎಂ ಶಿವಪ್ರಕಾಶ್, ಕೆಎಚ್ ಬಿ ಮಾಜಿ ಅಧ್ಯಕ್ಷ ಜಿ.ಎಚ್ ಹಾಲಪ್ಪ, ಸಮಾಜ ಸೇವಕ ಬಿ ಕೆ ಲಕ್ಷ್ಮಣ್ ಕುಮಾರ ಚಿಕ್ಕಮಗಳೂರು, ಯೋಜನಾ ವಿಭಾಗ ದ ಕಾರ್ಯಪಾಲಕ ಎಂಜಿನಿಯರ್ ಹರೀಶ್, ಸಹಾಯಕ ಇಂಜಿನಿಯರ್ ಸಂತೋಷ್ , ಮಂಗಳೂರು ಯೋಜನಾ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ರಾಜಾರಾಮ್, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್, ರಸ್ತೆ ಹೋರಾಟ ಸಮಿತಿಯ ಕೆ . ಜಿ ಗೋಖಲೆ, ಪದ್ಮನಾಭ ಕೆ, ಸುಂದರ ಕೆ, ಕರುಣಾಕರ ಅಡ್ಡಹಳ್ಳ, ನರಸಿಂಹ ಗೌಡ, ಹಾಗೂ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು .













