26.2 C
ಪುತ್ತೂರು, ಬೆಳ್ತಂಗಡಿ
August 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ವಿಜ್ಞಾಪನಾ ಪತ್ರ, ಆಮಂತ್ರಣ ಪತ್ರಿಕೆ ಬಿಡುಗಡೆ

ಅರಸಿನಮಕ್ಕಿ : ವಿಶೇಷ ಕಾರಣಿಕತೆಯೊಂದಿಗೆ, ಆಧ್ಯಾತ್ಮಿಕವಾಗಿ, ಪರಿಸರ ಸೊಬಗಿನ ಮೂಲಕ ಭಕ್ತರನ್ನು ಆಕರ್ಷಿಸುತ್ತಿರುವ ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನವನ್ನು ಭಕ್ತ ಸಮೂಹದ ಸಹಕಾರದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು ವಿಜ್ಞಾಪನಾ ಪತ್ರವನ್ನು ಆ. 7ರಂದು ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.

ವಿಜ್ಞಾಪನಾ ಪತ್ರವನ್ನು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ಉದ್ಯಮಿ ವಾಮನ ತಾಮ್ಹನ್ ಕರ್, ಸಮಾಜದ ಮುಂದಾಳು ಜಯರಾಮ ನೆಲ್ಲಿತ್ತಾಯ ನಿವೃತ್ತ ಸೇನಾನಿ ಮೋಹನ್ ಶೆಟ್ಟಿ, ದುಬೈಯ ಉದ್ಯಮಿ ರಾಮಮೂರ್ತಿ ಪಿಲಿಕ್ಕಬೆ ಮೊದಲಾದವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ವಾಮನ ತಾಮ್ಹನ್ ಕರ್, ರಾಘವೇಂದ್ರ ನಾಯಕ್ ಹಾಗೂ ಜಯರಾಮ ನೆಲ್ಲಿತ್ತಾಯ ಮಾತನಾಡಿ ಕ್ಷೇತ್ರದ ಕೆಲಸದೊಂದಿಗೆ ಸದಾ ಇರುವುದಾಗಿ ತಿಳಿಸಿದರು.
ವನದುರ್ಗಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ, ಆಡಳಿತ ಸಮಿತಿ ಅಧ್ಯಕ್ಷರಾದ ಪದ್ಮಯ್ಯ ಬಾರಿಗ, ವನದುರ್ಗಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್, ಮಾಜಿ ಅರ್ಚಕರಾದ ಉಲ್ಲಾಸ್ ಭಟ್, ಮಹಿಳಾ ಸದಸ್ಯರುಗಳು, ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ಸಂಜೀವ ಶೆಟ್ಟಿಗಾರ್, ಜಯಪ್ರಸಾದ್ ಶೆಟ್ಟಿಗಾರ್, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿಗಾರ್, ವ್ಯವಸ್ಥಾಪಕ ರೋಹಿತಾಶ್ವ ಶೆಟ್ಟಿಗಾರ್, ವನದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಜಗದೀಶ್ ಕಲ್ಲಕೋಟೆ, ಕಪಿಲ ಕೇಸರಿ ಗೆಳೆಯರ ಬಳಗದ ಪದಾಧಿಕಾರಿಗಳು, ಅರಿಕೆಗುಡ್ಡೆ ಕ್ಷೇತ್ರದ ನಿತ್ಯ ಸ್ವಯಂಸೇವಕರು, ಭಕ್ತರು ಉಪಸ್ಥಿತರಿದ್ದರು. ಕ್ಷೇತ್ರದ ಮುಖ್ಯ ಅರ್ಚಕರಾದ ವೃಷಾಂಕ ಖಾಡಿಲ್ಕರ್ ಉದ್ದೇಶಿತ ಕಾರ್ಯಯೋಜನೆ ಯಶಸ್ಸಿಗಾಗಿ ವಿಶೇಷವಾಗಿ ದೇವತಾ ಪ್ರಾರ್ಥನೆ ನೆರವೇರಿಸಿದರು.


ಈಗಾಗಲೇ ದೇಣಿಗೆ ನೀಡಿದ ದಾನಿಗಳು ಹಾಗೂ ವಾಗ್ದಾನಗೈದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.ಇದೇ ಸಂದರ್ಭ ಆ. 28 ರಂದು ನಡೆಯುವ ವರಮಹಾಲಕ್ಶ್ಮೀ ಪೂಜೆಯ ಆಹ್ವಾನ ಪತ್ರಿಕೆಯನ್ನೂ ಬಿಡುಗಡೆಗೊಳಿಸಲಾಯಿತು.

Related posts

ವೇಣೂರು: ನಿಟ್ಟಡೆ ಕುಂಭಶ್ರೀ ಶಾಲಾ- ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಗನ ಮದುವೆ ಸಂಭ್ರಮದಲ್ಲಿ ಇದ್ದ ತಂದೆ ಹೃದಯಾಘಾತದಿಂದ ಸಾವು

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕಬ್ ಬುಲ್ ಬುಲ್, ರೇಂಜರ್ ರೋವರ್, ಮಕ್ಕಳಿಗೆ ದೇಶ ಭಕ್ತಿ ಗೀತ ಗಾಯನ ಸ್ಪರ್ಧೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಟಿ.ವಿ. ಟೆಕ್ನಿಷಿಯನ್‌ ತರಬೇತಿ ಮತ್ತು ಸಿ.ಸಿ. ಟಿವಿ ಕ್ಯಾಮರ ತರಬೇತಿಯ ಸಮಾರೋಪ

Suddi Udaya

ಮೊಗ್ರು ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಜೆಸಿಐ ಉಜಿರೆ ಘಟಕ ಮತ್ತು ಮಹಿಳಾ ಜೆಸಿ ವಿಭಾಗದಿಂದ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!