ಬೆಳ್ತಂಗಡಿ: ದೇವಾಂಗ ಸಮಾಜ -ಮುಂಡಾಜೆ ಘಟಕದ ವತಿಯಿಂದ ನಡೆಯುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೆ. ಏನ್.ಜನಾರ್ಧನ ರವರು ಸಿರಿ ಸಂಸ್ಥೆಯ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ದೇವಾಂಗ ಸಮಾಜ -ಉಜಿರೆ ವಲಯದ ಅಧ್ಯಕ್ಷ ರವಿ ನೈಯ್ಯಾಲು, ಮುಂಡಾಜೆ ಘಟಕದ ಅಧ್ಯಕ್ಷ ರಾಜ್ ಗೋಪಾಲ್, ನೂತನ ಅಧ್ಯಕ್ಷ ಶಶಿಧರ್, ಬನಶಂಕರಿ ಕೊಡಂಗೆ, ನೂತನ ಕಾರ್ಯದರ್ಶಿ ಸಚಿನ್ ಎಂ.ಎಸ್, ಮುಂಡಾಜೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶ್ರೀಮತಿ ವಸಂತಿ, ರಾಜೇಶ್ ಮುಂಡಾಜೆ, ಪುಷ್ಪಾ ಕಡಂಬಳ್ಳಿ, ಹೇಮಾ ರಾಜೇಶ್, ಶ್ರೀಮತಿ ರಕ್ಷಿತಾ ಶಶಿಧರ್, ಶ್ರೀಮತಿ ದೀಕ್ಷಿತಾ ಸಚಿನ್, ಶ್ರೀಮತಿ ಶಾರದಾ ಮತ್ತಿತರರು ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಸಿಬ್ಬಂದಿ ಯತೀಶ್, ವಿನ್ಸೆಂಟ್ ಲೋಬೋ ನಿರ್ವಹಿಸಿದರು.













