23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾಲ್ಕೂರು: ನಿಟ್ಟಡ್ಕ ಪಲ್ಕೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯ ರಾಶಿಪೂಜೆ

ನಾಲ್ಕೂರು: ತುಳುನಾಡು ಜನಪದ ಕಲೆಗಳ ಆಗರ, ಅಂತಹ ಶ್ರೀಮಂತ ಜನಪದ ಕಲೆಗಳಲ್ಲಿ ಒಂದಾದ ಸುಗ್ಗಿಯ ಹುಣ್ಣಿಮೆಯ ಮೂರು ದಿನಗಳಲ್ಲಿ ಜೋಗಿ ಪುರುಷರ ಕಟ್ಟುವಿಕೆಯ ಆಚರಣೆ ಕೂಡ ಒಂದು.‌ ಈ ಆಚರಣೆಯನ್ನ ಅನಾಧಿಕಾಲದಿಂದಲೂ ಅತ್ಯಂತ ಶ್ರದ್ಧೆ ಭಕ್ತಿಯಿಂದ ನಾಲ್ಕೂರು ಗ್ರಾಮದ ನಿಟ್ಟಡ್ಕದ ಪಲ್ಕೆಯಲ್ಲಿ ನಡೆಸಿಕ್ಕೊಂಡು ಬರುತಿದ್ದು ಹಿರಿಯರ ಮಾರ್ಗದರ್ಶನದೊಂದಿಗೆ ಊರ ಪರವೂರ ಬಂಧುಗಳು ಈ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಈ ಆಚರಣೆಯ ಪುರುಷರ ರಾಶಿಪೂಜೆ ನಿಟ್ಟಡ್ಕ ಪಲ್ಕೆಯಲ್ಲಿ ಎ.8 ರಂದು ನೆರವೇರಿತು‌.
ಮೂರು ದಿನಗಳಿಂದ ಮನೆ ಮನೆಗೆ ವಿವಿಧ ವೇಷ ಭೂಷಣಗಳೊಂದಿಗೆ ತೆರಳಿ ಬರುವ ಜೋಗಿ ಪುರುಷರು ನಂತರ ಕದ್ರಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ರಾಶಿ ಪೂಜೆಯಲ್ಲಿ ಭಾಗವಹಿಸುತ್ತಾರೆ.

ಊರ ಸಮಸ್ತರ ಸಹಕಾರದೊಂದಿಗೆ ಅತ್ಯಂತ ಭಕ್ತಿ ಭಾವದೊಂದಿಗೆ ರಾಶಿ ಪೂಜೆ ನಡೆಯಿತು.

Related posts

ಬೆಳ್ತಂಗಡಿ ವಕೀಲರ ಸಂಘದಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ

Suddi Udaya

ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ: ನಡ ಕಾಲೇಜಿನ ಹುಡುಗರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಸುಲ್ಕೇರಿಮೊಗ್ರು, ಬಿಲ್ಲವ ಸಂಘದ ಸದಸ್ಯರಿಂದ ಶಿವಗಿರಿ ತೀರ್ಥಯಾತ್ರೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾ ಕಲರವ ಉದ್ಘಾಟನೆ

Suddi Udaya

ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

Suddi Udaya

ಪ್ರಮೋದ್ ಕುಮಾರ್ ರವರಿಗೆ ‘ಪಣಿಕ್ಕರ್’ ಬಿರುದು

Suddi Udaya
error: Content is protected !!