ಉಜಿರೆ : ಪ್ರಗತಿ ಮಹಿಳಾ ಮಂಡಲ, ಉಜಿರೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಸುಜಾತ ಭಟ್, ಕಾರ್ಯದರ್ಶಿಯಾಗಿ ಶೋಭಾ ರಘುಪತಿ ಕಾಮತ್, ಕೋಶಾಧಿಕಾರಿಯಾಗಿ ನಳಿನಿ ಇಚ್ಚಿಲ ಆಯ್ಕೆಯಾಗಿರುತ್ತಾರೆ.

ಗೌರವಾಧ್ಯಕ್ಷರಾಗಿ ಸರಸ್ವತಿ. ಎನ್ ರಾಜ್ ಹಾಗೂ ಜಯಶ್ರೀ ಬಿಎಮ್ ಗೌಡ, ಉಪಾಧ್ಯಕ್ಷರಾಗಿ ಕಾಂತಿ ಶ್ರೀಧರ್, ಜೊತೆ ಕಾರ್ಯದರ್ಶಿಯಾಗಿ ರೀನಾ ಎಸ್ ಗೌಡ , ಗೌರವ ಸಲಹೆಗಾರರಾಗಿ ಕಾಂತಿ ಶೇಷಗಿರಿ ಶೆಣೈ, ಜ್ಯೋತಿ ಪ್ರತಾಪ್ ಸಿಂಹ ನಾಯಕ್, ಸದಸ್ಯರಾಗಿ ಗಾಯತ್ರಿ ಶ್ರೀಧರ್, ಜಯಶ್ರೀ ಪ್ರಕಾಶ್(ಅಪ್ರಮೇಯ ), ಧರ್ಮಾವತಿ, ಸವಿತಾ ಜಯದೇವ್, ನಂದಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಮತ್ತು ಮಾಜಿ ಪದಾಧಿಕಾರಿಗಳ ಜಂಟಿ ನೇತೃತ್ವದಲ್ಲಿ ಆಟಿ ಕೂಟವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಚೆನ್ನಮಣೆ ಆಟ ಆಡುವ ಮೂಲಕ ಆಟಿ ಕೂಟದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸುಜಾತ ಭಟ್ ಆಟಿಯ ವಿವರಣೆ, ಶೋಭಾ ಆರ್ ಕಾಮತ್ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ತಂದವರ ಹೆಸರುಗಳನ್ನು ಓದಿದರು ಹಾಗೂ ಪ್ರೋತ್ಸಾಹಕರ ಬಹುಮಾನವನ್ನು ಎಲ್ಲರಿಗೂ ನೀಡಲಾಯಿತು.
ಸುನಿತಾ ಶೆಟ್ಟಿ ಪ್ರಾರ್ಥಿಸಿ, ಜಯಶ್ರೀ ಪ್ರಕಾಶ್ ಸ್ವಾಗತಿಸಿ, ಗಾಯತ್ರಿ ಶ್ರೀಧರ್ ನಿರೂಪಿಸಿದರು. ನಳಿನಿ ಇಚ್ಚಿಲ ಧನ್ಯವಾದವಿತ್ತರು.













