28.6 C
ಪುತ್ತೂರು, ಬೆಳ್ತಂಗಡಿ
August 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮೇಲಂತಬೆಟ್ಟು ಬದಿನಡೆ ನಾಗಬ್ರಹ್ಮ ದೇವಸ್ಥಾನದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ, ಗರ್ಭಗುಡಿಯಲ್ಲಿ ನಾಗದೇವರ ಪ್ರತ್ಯಕ್ಷ

ಮೇಲಂತಬೆಟ್ಟು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟಿನ “ಕೀರ್ತಿ” ಪ್ರಬುದ್ಧ ಜ್ಞಾನವಿಕಾಸ ಕೇಂದ್ರದ ವತಿಯಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಬದಿನಡೆ ನಾಗಬ್ರಹ್ಮ ದೇವಸ್ಥಾನದ ಪೂರ್ಣ ಆವರಣವನ್ನು ಸ್ವಚ್ಛಗೊಳಿಸುವ ಮೂಲಕವಾಗಿ ನಡೆಸಲಾಯಿತು.

ಈ ಸಂದರ್ಭ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೈಲೇಶ್ ಕುರ್ತೋಡಿ, ಮೇಲ್ವಿಚಾರಕರಾದ ರಾಮ್ ಕುಮಾರ್, ಸೇವಾಪ್ರತಿನಿಧಿ ಲೀಲಾವತಿ, ಸದಸ್ಯರಾದ ನಿತಾ, ಅಶ್ವಿನಿ, ನಳಿನಿ, ವಿಜಯ, ಅಪ್ಪಿ, ಸುಶೀಲ, ವಿಧ್ಯಾ, ಶಶಿಕಲಾ, ಸೀತಾ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ನಾಗದೇವರ ಪ್ರತ್ಯಕ್ಷ: ನಾಗಬ್ರಹ್ಮ ದೇವಸ್ಥಾನದ ಗರ್ಭಗುಡಿಯ ಒಳಭಾಗದಲ್ಲಿರುವ ಹುತ್ತದಿಂದ ಹೊರಬಂದ ನಾಗದೇವರು ಸ್ವಚ್ಛತಾ ಕಾರ್ಯದಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆ ಪ್ರತ್ಯಕ್ಷ ದರ್ಶನ ನೀಡಿದೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ

Suddi Udaya

ವೇಣೂರು ಪಿಎಸ್ಐ ಅಕ್ಷಯ್ ಡಿ ಅವರಿಗೆ ವೇಣೂರು ಸೊಸೈಟಿಯಿಂದ ಗೌರವ

Suddi Udaya

ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ

Suddi Udaya

ಅರಸಿನಮಕ್ಕಿ : ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಅಭಿನಂದನೆ

Suddi Udaya

ಪದ್ಮುಂಜ ದಾಮೋದರ ನಾಯ್ಕ್ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಶಿರ್ಲಾಲಿನಲ್ಲಿ 25ನೇ ವರ್ಷದ ಗುರುಪೂಜಾ ಕಾರ್ಯಕ್ರಮ

Suddi Udaya
error: Content is protected !!