ಗುರುವಾಯನಕೆರೆ: ಶ್ರೀ ಶಾರದಾಂಭ ಭಜನಾ ಮಂಡಳಿ ವತಿಯಿಂದ, ಗೆಳೆಯರ ಬಳಗ ಗುರುವಾಯನಕೆರೆ ಇವರ ಸಹಕಾರದೊಂದಿಗೆ ಆ.21 ಶುಕ್ರವಾರ ಆಚರಿಸುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ಕಂಚಿಂಜೆ ಯವರು ಬಿಡುಗಡೆಗೊಳಿಸಿ, ಸರ್ವರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ರೀತಾ ವೈ. ಆಚಾರ್ಯ, ಜಯಂತಿ, ಸುಧಾಮಣಿ, ಶಶಿಕಲಾ, ಕವಿತಾ, ನಮಿತಾ, ಕುಮುದ ಹಾಗೂ ಸದಸ್ಯರು ಉಪಸ್ಥಿತರಿದ್ದರು.













