
ಬೆಳ್ತಂಗಡಿ : ಮಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಯವರ ಮಾರ್ಗದರ್ಶನ ಮತ್ತು ಶುಭಶೀರ್ವಾದಗಳೊಂದಿಗೆ 27ನೇ ವರ್ಷದ ಶ್ರೀ ಮಹಾಲಕ್ಷ್ಮೀ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮವು ಸುದೀರ್ಘ 48 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಆಗಸ್ಟ್ 28 ರಂದು ಸಂಪನ್ನಗೊಳ್ಳಲಿದೆ . ಸ್ವಾಮೀಜಿಗಳ ಆಶಯದಂತೆ ಬೆಳ್ತಂಗಡಿ ತಾಲೂಕಿನಿಂದ ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಲಿದ್ದು, ಹೊರೆಕಾಣಿಯನ್ನು ಸಮರ್ಪಣೆ ಮಾಡುವ ಭಕ್ತರು ಇದೇ ತಿಂಗಳ ದಿನಾಂಕ 16 ರಿಂದ 19ರ ಒಳಗಡೆ ತಮ್ಮ ಹೊರೆ ಕಾಣಿಕೆಯನ್ನು ಕುಲಾಲ ಮಂದಿರದಲ್ಲಿ ತಂದು ಒಪ್ಪಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಭಾರ ಅಧ್ಯಕ್ಷರಾದ ಯಾದವ ಮುಂಡೂರು, ಕಾರ್ಯದರ್ಶಿ ಸುಧೀರ್ ಕೆ. ಎನ್ ಸದಸ್ಯರುಗಳಾದ ಯತೀಶ್ ಸಿರಿಮಜಲ್, ಲೋಕೇಶ್ ಕುಲಾಲ್, ಅವಿನಾಶ್ ಮಾಣೂರು, ತಿಲಕ್ ರಾಜ್ ಕುಲಾಲ್, ಉಮೇಶ್ ಕುಲಾಲ್, ದಿನೇಶ್ ಕೊಂಡೆಮಾರ್, ಗಂಗಾಧರ ಕುಲಾಲ್, ತಾರಾನಾಥ ಕುಲಾಲ್ ಹನೈನಡೆ ಹಾಗೂ ಸಂಘದ ಮೆನೇಜರ್ ಮುಖೇಶ್ ಕುಲಾಲ್ ಇವರನ್ನು ಸಂಪರ್ಕಿಸಲು ತಾಲೂಕು ಸಂಘದ ಗೌರವ ಅಧ್ಯಕ್ಷ ಹರೀಶ್ ಕಾರಿಂಜ ವಿನಂತಿಸಿದ್ದಾರೆ.







