ಬೆಳ್ತಂಗಡಿ: 80ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಕನ್ಯಾಕುಮಾರಿ ಯುವತಿ ಮಂಡಲ (ರಿ). ಧರ್ಮಸ್ಥಳ ಇದರ ಸ್ಥಾಪಕ ಅಧ್ಯಕ್ಷರಾದ ಡಾ|| ಹೇಮಾವತಿ ವೀ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರದ ಕನ್ನಡ ಪತ್ರ ವಿಭಾಗದ ಮುಖ್ಯಸ್ಥೆ ಭವಾನಿ ಬಿ. ರಾವ್ ಧ್ವಜಾರೋಹಣಗೈದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರನ್ನು ಸ್ಮರಿಸುತ್ತಾ, “ಮನೆಯೇ ಮೊದಲ ಪಾಠ ಶಾಲೆ” ಎಂಬAತೆ ಮಕ್ಕಳಿಗೆ ದೇಶಪ್ರೇಮ, ನಮ್ಮ ನಾಡು ನಮ್ಮ ಸಂಸ್ಕೃತಿ ಹಾಗೂ ಮಾದಕ ವ್ಯಸನಗಳಿಂದ ದೂರವಿರುವಂತೆ ಅರಿವು ಮೂಡಿಸುವುದು ಮಹಿಳೆಯರಾದ ನಮ್ಮ ಆದ್ಯ ಕರ್ತವ್ಯ ಎಂಬುದಾಗಿ ತಿಳಿಸಿದರು. ಸಂಘದ ಅಧ್ಯಕ್ಷೆ ಮಂಜುಳ ಆಚಾರ್ ಸ್ವಾಗತಿಸಿ, ಸದಸ್ಯೆ ಮಂಜುಳಾ ಶೆಟ್ಟಿ ಧನ್ಯವಾದವಿತ್ತರು.
previous post







