ಬಳಂಜ: ಐದು ವರ್ಷಗಳ ಹಿಂದೆ ಹಳ್ಳಿ ಪ್ರದೇಶದಲ್ಲಿ ಪ್ರಾರಂಭವಾದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಇಂದು ಸುಮಾರು 11 ಜಿಲ್ಲೆ, 2 ರಾಜ್ಯಗಳಿಗೆ ಭಕ್ತಿ ಹೆಜ್ಜೆ ಕಾಲಿಟ್ಟು 400 ನೇ ಕಾರ್ಯಕ್ರಮದ ವರೆಗೆ ಸಾಗಿ ಬಂದು ರಾಜ್ಯ ಹಾಗೂ ಜಿಲ್ಲೆಯಲ್ಲಿ ಅತ್ಯಂತ ಉತ್ತಮ ತಂಡ ಎಂದು ಹೆಸರು ಪಡೆದುಕೊಂಡಿದೆ, ಭಜನೆ ಮಾತ್ರ ಅಲ್ಲದೆ ಸಮಾಜಮುಖಿ ಕೆಲಸದೊಂದಿಗೆ ಕೈಜೋಡಿಸಿ, ಅಶಕ್ತ ಕುಟುಂಬಗಳಿಗೆ ವೈದ್ಯಕೀಯ ನೆರವು, ವಿದ್ಯಾನಿಧಿಯ ಸಹಾಯಧನ, ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಈ ದಿನ ಹಾಸನ ಜಿಲ್ಲೆಯ ಅರಕಲಗೂಡು, ಹುಲಿಕಲ್ಲು ಇಲ್ಲಿ ನಡೆಯುವ ಗರುಡೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಲ್ಲಲು ಹಾಸನ ಜಿಲ್ಲೆಗೆ 4ನೇ ಬಾರಿ ಕಾರ್ಯಕ್ರಮ ನೀಡಲು ಪ್ರಯಾಣಿಸುತ್ತಿದೆ.
ಬ್ರಹ್ಮಶ್ರೀ 400 ನೇ, ಕಾರ್ಯಕ್ರಮಕ್ಕೆ ಇಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಬಳಂಜ ಇದರ ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿಯವರು ತೆಂಗಿನಕಾಯಿ ಹೊಡೆದು ಮಕ್ಕಳ ಭಕ್ತಿ ಹೆಜ್ಜೆ ಪ್ರಯಾಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಸೇರಿದಂತೆ ಮಂಡಳಿಯ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.












