August 18, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ ಸ್ಪಂದನ ರೈತರ ಸೇವಾ ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

ಬಾರ್ಯ: ಬಾರ್ಯದ ಮೂರುಗೋಳಿ ಶ್ರೀ ಪಾಂಡುರಂಗ ಭಜನಾಮಂದಿರದಲ್ಲಿ‌ ಬಾರ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಸೇಸಪ್ಪ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸ್ಪಂದನಾ ರೈತರ ಸೇವಾ ಕೂಟದ ಕಾರ್ಯಕಾರಿಣಿ ಸಭೆ ಸೇರಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

ಬಾರ್ಯ ಸಿಎ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಗೌಡ, ಪ್ರವೀಣ್ ರೈ ಹಾಗೂ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಪೈ, ರಾಜೇಶ್ ರೈ,ನೂತನ ಸಮಿತಿಯ ರಚನೆಗೆ ವಿಚಾರ ಮಂಡಿಸಿದರು. ಬಾರ್ಯ‌, ಪುತ್ತಿಲ ಗ್ರಾಮದ ಸಮಸ್ತ ರೈತರನ್ನು ಸದಸ್ಯರನ್ನಾಗಿಸಿ ಎರಡೂ ಗ್ರಾಮಗಳಿಗೂ ಸಮಾನಾಗಿ ಪ್ರಾಧಾನ್ಯತೆ ನೀಡವಂತೆ ಸಮಿತಿ ರಚಿಸಿ ಕಾರ್ಯಾಚರಿಸುವಂತೆ ಪ್ರಗತಿಪರ ಕೃಷಿಕರಾದ ಮೋನಪ್ಪ ಗೌಡ ಮಣಿಲ ಸಲಹೆ ನೀಡಿದಾಗ ಎರಡು ಗ್ರಾಮದ ಸದಸ್ಯರು ಸಮ್ಮಿತಿಸಿದರು.

ಮುಂದಿನ ಅವಧಿಗೆ ಅಧ್ಯಕ್ಷರಾಗಿ ರೋಹಿತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮನೋಹರ್ ಶೆಟ್ಟಿ, ಮೋನಪ್ಪ ಗೌಡ, ಕಾರ್ಯದರ್ಶಿ ಯಾಗಿ ವಿಶ್ವನಾಥ ಗೌಡ ಅಜಿರ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ಕುರುಡಂಗೆ, ಕೋಶಾಧಿಕಾರಿಯಾಗಿ ರಾಮಣ್ಣ ಗೌಡ, ಉಪಾಧ್ಯಕ್ಷರಾಗಿ ಜಗದೀಶ, ಗೌರವ ಸಲಹೆಗಾರರಾಗಿ ಮಂಜುನಾಥ್ ಸಾಲ್ಯಾನ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸೇವಾ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರು ಖಾಯಂ ಆಹ್ವಾನಿತರಾಗಿ ಹಾಗೂ ಸದಸ್ಯ ರೈತರು ಒಟ್ಟು ಸೇರಿ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ರೈತರು ಕೃಷಿ ಚಟುವಟಿಕೆ, ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸವನ್ನು ಮಾಡಿ ಕೂಟದ ಉದ್ದೇಶವನ್ನು ಪ್ರಸನ್ನ ಗೌಡ ಪ್ರವೀಣ್ ರೈ ಸಭೆಗೆ ಸಮಗ್ರ ಮಾಹಿತಿ ನೀಡಿದರು. ಸಿಎ ನಿರ್ದೇಶರಾದ ಬ್ಯಾಂಕ್ ಮೋನಪ್ಪ ಗೌಡ ಅಜಿರ, ಸವಿತಾ, ಅರುಣ ಬಂಗೇರ, ವಸಂತ ಗೌಡ, ಶಿವರಾಮ ,ಹೇಮಾವತಿ, ಅರ್ಪಿತ್, ಚಂದ್ರಶೇಖರ ,ಸಿಎ ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಸತೀಶ್, ಹಾಗೂ ರಾಮಣ್ಣ ಕುರುಡಂಗೆ ,ಯಜ್ಞೇಶ್ , ಶ್ರೀಧರ್ ಪೆಲತ್ತಾಜೆ ಮತ್ತಿರರು ಉಪಸ್ಥಿತರಿದ್ದರು.

Related posts

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Suddi Udaya

ಕಾಯರ್ತಡ್ಕ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ನಲ್ಲಿ “ಸ್ವರ್ಣ ಬಿಂದು ಪ್ರಾಶನ” ಶಿಬಿರ

Suddi Udaya

ಬಂಗಾಡಿ ಸರಕಾರಿ ಪ್ರೌಢಶಾಲೆಗೆ ಶೇ.98 ಫಲಿತಾಂಶ

Suddi Udaya

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನವೀಕೃತ ಮಡಂತ್ಯಾರು ಶಾಖೆಯ ಉದ್ಘಾಟನೆ

Suddi Udaya

ತೆಕ್ಕಾರು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ಬೆಳ್ತಂಗಡಿ ಪಿ.ಎಂ. ಶ್ರೀ ಸರಕಾರಿ ಮಾ. ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳ ಮೆಟ್ರಿಕ್ ಮೇಳ – ವ್ಯವಹಾರಿಕ ಜ್ಞಾನಕ್ಕೆ ವೇದಿಕೆ

Suddi Udaya
error: Content is protected !!