ಅರಸಿನಮಕ್ಕಿ: ಇಲ್ಲಿಯ ಬೂಡುಮುಗೇರು ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಇದ್ದು ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ ಕಷ್ಟಕರವಾಗಿತ್ತು.


ಇದನ್ನು ಮನಗಂಡು ಆ. 23 ರಂದು ಅರಸಿನಮಕ್ಕಿ ರಿಕ್ಷಾ ಚಾಲಕರಾದ ರಾಕೇಶ್ ಶೆಟ್ಟಿ, ಉಪೇಂದ್ರ, ಹಾಗೂ ಸ್ಧಳೀಯ ಯುವಕರಾದ ಸಲ್ಮಾನ್ ಫರೀಝ್, ಮಹಮ್ಮದ್ ಫಝಲ್, ಬ್ರಿಜೇಶ್, ಶ್ರವಣ್ ಕುಮಾರ್, ಯುವರಾಜ್ ಬಿ.ಎಸ್ ಶ್ರಮದಾನ ಮೂಲಕ ಗಂಡಿಗಳಿಗೆ ಕಲ್ಲುಹಾಕಿ ಮುಚ್ಚಿದ್ದರು.











