ಬೆಳ್ತಂಗಡಿ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2025-2026 ನೇ ಸಾಲಿನ ಮಹಾಸಭೆಯು ಸೆ 20 ಆದಿತ್ಯವಾರ ಪೂರ್ವಾಹ್ನ ಘಂಟೆ 10.30 ಕ್ಕೆ ಶ್ರೀಗುರು ಕಲ್ಯಾಣ ಮಂಟಪ, ಸುಭಾಷ್ ನಗರ ಸಜೀಪಮೂಡ ದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ತಿಳಿಸಿದ್ದಾರೆ.
ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 31/03/2026 ರ ಒಳಗೆ ನಮ್ಮ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ ಯಲ್ಲಿ ಶೇ 90% ಮತ್ತು ಪಿ ಯು ಸಿ ಶೇ 85% ಅಂಕ ಹಾಗೂ ಅದಕ್ಕಿಂತ ಮೇಲ್ಪಟ್ಟು ವಿದ್ಯಾಭ್ಯಾಸಕ್ಕೆ ಶೇ 75% ಅಂಕ ಗಳಿಸಿದ ವಿಧ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಕೇಂದ್ರ ಕಚೇರಿ ಇಲ್ಲವೇ ಶಾಖೆಗಳಲ್ಲಿ ಪಡೆದು ಹಾಗೂ ದಿನಾಂಕ 15/09/2026 ರಂದು ತಲುಪಿಸತ್ತಕ್ಕದ್ದು. ಹಾಗೂ ದಿನಾಂಕ 20/09/2026 ರಂದು ನಡೆಯುವ ಮಹಾಸಭೆಯಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.











